ನಾನು ರಾಜೀನಾಮೆ ಕೊಟ್ಟಿಲ್ಲ ಎಂದ ರಮ್ಯ

ನವದೆಹಲಿ 

    ಕಾಂಗ್ರೇಸ್ ಮಾಜಿ ಸಂಸದೆ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯಸ್ಪಂದನ (ರಮ್ಯ) ಅವರನ್ನು ಕಾಂಗ್ರೇಸ್ ಈಗಿರುವ ಹೊಣೆಗಾರಿಕೆಯಿಂದ ತಪ್ಪಿಸಲಾಗಿದೆ ಎಂಬ ವದಂತಿ ಹಬ್ಬಿತ್ತು ಆದರೆ ಈಗತಾನೆ ಸ್ಪಷ್ಟನೆ ನೀಡಿರುವ ಅವರು ನಾನು ರಜೆಯಲ್ಲಿ ಇದ್ದೇನೆ ಬಂದ ನಂತರ ಪಕ್ದ ಕಾರ್ಯಗಳಲ್ಲಿ ತೊಡಗುತ್ತೇನೆ ಎಂದು ಇಂದು ಹೇಳಿದ್ದಾರೆ ಮತ್ತು ನನ್ನ ಟ್ವಿಟ್ಟರ್ ಖಾತೆಯಲ್ಲಿ ತಾಂತ್ರಿಕ ದೋಷದಿಂದಾಗಿ ಈ ರೀತಿ ಆಗಿದೆ ಎಂದು ಸಮಜಾಯಿಶಿ ಕೊಟ್ಟಿದ್ದಾರೆ .

    ಅವರು ತಮ್ಮ ವಯಕ್ತಿಕ ದೃಷ್ಠಿಕೋನವನ್ನು ಪಕ್ಷದ ಮೇಲೆ ಹೇರಲು ಮತ್ತು ಹಿರಿಯರ ಬಗ್ಗೆ ಅಸಡ್ಡೆ ತೊರುವುದು ಮುಂತಾದ ಸ್ವಯೋ ಕೃತ ಅಪರಾಧಗಳಿಂದ ರಮ್ಯ ಅವರನ್ನು ಕಾಂಗ್ರೇಸ್ ಈಗಿನ ಸ್ಥಾನದಿಂದ ತೊಲಗಿಸಿದೆ ಎಂಬ ಮಾತು ಬಹಳವಾಗಿ ಸದ್ದು ಮಾಡಿತ್ತು ಆದರೆ ಸ್ವಲ್ಪ ಸಮಯದ ಮುಂಚೆ ರಮ್ಯ ಪ್ರತಿಕ್ರಿಯಿಸಿ ಅಂತಹ ವದಂತಿಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ ಮತ್ತು ಅವರ ಸ್ಥಾನಕ್ಕೆ ಮಾರ್ಗರೇಟ್ ಆಳ್ವಾ ಅವರ ಪುತ್ರ ನಿಖಿಲ್ ಆಳ್ವಾ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ ಎಂಬ ಸುಳ್ಳು ಸುದ್ಧಿ ಕೂಡ ಬರಿ ಊಹೆ ಎಂದು ಸ್ಪಷ್ಟನೆ ನೀಡಿದ್ದಾರೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link
Powered by Social Snap