ಪಣಜಿ:
ಇಷ್ಟು ದಿನ ವ್ಯರ್ಥವಾಗಿ ಪೋಲಾಗುತ್ತಿದ್ದ ಗೋವಾದ ಜೀವನಾಡಿ ಮಹದಾಯಿ ನೀರನ್ನು ಸಂಪೂರ್ಣ ಬಳಸಿಕೊಳ್ಳಲು ಯೋಜನೆ ಆರಂಭಿಸಲಾಗುವುದು ಎಂದು ಗೋವಾದ ಮಂತ್ರಿ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.
ಈ ಯೋಜನೆಗಾಗಿ ಸುಮಾರು 100 ಕೋಟಿ ರೂ. ಖರ್ಚಾಗಲಿದೆ. 110 ಎಂಎಲ್ಡಿ ನೀರು ಸಂಸ್ಕರಣಾ ಸಾಮರ್ಥ್ಯದ ಘಟಕ ಸ್ಥಾಪನೆ ಮಾಡಲಾಗುವುದು. ಈ ಘಟಕದಿಂದ ಗೋವಾದ ಬಹುತೇಕ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಲಭಿಸಲಿದೆ. ಗಾಂಜೆ ಎಂಬಲ್ಲಿ ಒಂದು ದೊಡ್ಡ ಬಾಂದಾರ್ ನಿರ್ಮಿಸಿ ಅಲ್ಲಿಂದ ಖಾಂಡೆಪಾರ್ ನದಿಗೆ ಹರಿಬಿಡಲಾಗುತ್ತದೆ. ಅಲ್ಲಿಂದ ಓಪಾ ನೀರಿನ ಸಂಸ್ಕರಣಾ ಘಟಕದ ಮೂಲಕ ಗೋವಾದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಾಗಲಿದೆ. ಇದರಿಂದಾಗಿ ಗೋವಾದಲ್ಲಿ ಬಹುತೇಕ ಪ್ರಮಾಣದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/mylakhi-w020873317402.gif)