ತಿರುವನಂತಪುರ:
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ರಾಜ್ಯಪಾಲರಾದ ತಮ್ಮ ಅಂಗೀಕಾರ ಪಡೆಯದೆಯೇ ರಾಜ್ಯ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಎಂದು ಹೇಳಿದ್ದಾರೆ. ಏನೆ ಮಾಡಬೇಕಾದರು ಅದಕ್ಕೆ ಅದರದೇ ಆದ ಪಾಲನಾ ನಿಯಮ ಮತ್ತು ನಿಬಂಧನೆಗಳಿವೆ .
ಕಾನೂನಿಗಿಂತಲೂ ದೊಡ್ಡವರು ಯಾರು ಇಲ್ಲಾ ಇಲ್ಲಿ. ನ್ಯಾಯಾಂಗದ ವಿರುದ್ಧ ನಾನು ನಡೆಯುವುದಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ನಾನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥನಾಗಿರುವುದರಿಂದ ರಾಜ್ಯ ಸರ್ಕಾರ ನನಗೆ ಮೊದಲು ಮಾಹಿತಿ ನೀಡಬೇಕಿತ್ತು. ಆದರೆಯಾವುದೇ ಅನುಮತಿ ಪಡೆಯದೇ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಾಗಿದೆ. ಪತ್ರಿಕೆ ಹಾಗೂ ಕೆಲ ಮಾಧ್ಯಮಗಳ ಮೂಲಕ ನಾನು ಮಾಹಿತಿ ತಿಳಿದುಕೊಂಡಿದ್ದೇನೆ.
ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಕೇರಳ ಸಂಪುಟ ಅನುಮೋದನೆಗೊಳಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಗೀಕಾರ ನೀಡಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ. ನಾನು ಸಂವಿಧಾನ ರಕ್ಷಕ ಆದರೆ ನನ್ನನ್ನು ರಬ್ಬರ್ ಸ್ಟ್ಯಾಂಪ್ ರೀತಿ ನೋಡಬಾರದು ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
![](https://prajapragathi.com/wp-content/uploads/2020/01/Untitled-4.gif)