ಮುಂದಿನ ಎರಡು ಅವಧಿಗೂ ನಾನೇ ಮುಖ್ಯಮಂತ್ರಿ : ಕೆ ಸಿ ಆರ್

ಹೈದರಾಬಾದ್

    ಅನಾರೋಗ್ಯದ ಕಾರಣದಿಂದ ಹುದ್ದೆಯಿಂದ ಕೆಳಗಿಳಿಯುವ ವದಂತಿಯನ್ನು ತಳ್ಳಿ ಹಾಕಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಮುಂದಿನ ಎರಡು ಅವಧಿಗೂ ಮುಖ್ಯಮಂತ್ರಿಯಾಗಿಯೇ ಮುಂದುವರಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ವಿಧಾನಸಭೆಯಲ್ಲಿ ಬಜೆಟ್ ಮೇಲಿನ ವಿಸ್ತೃತ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಅನಾರೋಗ್ಯದ ಕಾರಣದಿಂದ ತಾವು ಹುದ್ದೆಯಿಂದ ಕೆಳಗಿಳಿದು, ತಮ್ಮ ಪುತ್ರ ಹಾಗೂ ಸಚಿವ ಕೆ.ಟಿ.ರಾಮರಾವ್ ಅವರನ್ನು ಮುಖ್ಯಮಂತ್ರಿ ಗಾದಿಗೇರಿಸುವ ವದಂತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.

    ಮುಂದಿನ ಮೂರು ಅವಧಿಗೆ ರಾಜ್ಯದಲ್ಲಿ ಟಿಆರ್ ಎಸ್ ಅಧಿಕಾರಕ್ಕೆ ಮರಳುವ ವಿಶ್ವಾಸವಿದೆ. ತಮಗೀಗ 66 ವರ್ಷಗಳು. ತಾವಿನ್ನೂ 10 ವರ್ಷಗಳ ಕಾಲ ಕೆಲಸ ಮಾಡಲು ಶಕ್ತರಿದ್ದೇವೆ ಎಂದು ಸ್ಪಷ್ಟಪಡಿಸಿದರು. ನದಿ ನೀರಿನ ಸದ್ಬಳಕೆ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಮನವಿಗೆ ಸ್ಪಂದಿಸಿದ ಅವರು, ರೆಡ್ಡಿ ಅವರೊಂದಿಗೆ ಚರ್ಚಿಸಿ ಎರಡೂ ರಾಜ್ಯಗಳ ರೈತರ ಅನುಕೂಲಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

   ಉಭಯ ರಾಜ್ಯಗಳ ಹಿಂದಿನ ವೈಮನಸ್ಯವನ್ನು ಮರೆತು, ಕೃಷ್ಣ ಹಾಗೂ ಗೋದಾವರಿ ನದಿ ನೀರುಗಳ ಸದ್ಬಳಕೆಗೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap