ನವದೆಹಲಿ:
ರಾಷ್ಟ್ರ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಗೆದ್ದ ನಂತರ ದೇಶದ ರಾಜಕಾರಣದಲ್ಲಿ ನೈತಿಕತೆ ಇನ್ನೂ ಜೀವಂತವಾಗಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಚಿದಂಬರಂ ಹೇಳಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಕುತೂಹಲ ಮೂಡಿಸಿದ್ದ ರಾಜ್ಯದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದವರಲ್ಲಿ ಇಬ್ಬರನ್ನು ಹೊರತು ಪಡಿಸಿ ಉಳಿದವರೆಲ್ಲ ಗೆದ್ದಿದ್ದಾರೆ. ಅನರ್ಹರಾಗಿದ್ದ ಶಾಸಕರೆಲ್ಲರೂ ಹೀನಾಯವಾಗಿ ಸೋಲು ಕಾಣುತ್ತಾರೆ ಎಂದೆಣಿಸಿದ್ದ ಕಾಂಗ್ರೆಸ್ ಲೆಕ್ಕಾಚಾರ ಪೂರ್ತಿ ಉಲ್ಟಾ ಹೊಡೆದಿದೆ ಹಿಂಬಾಗಿಲಿನಿಂದ ಸರ್ಕಾರ ಮಾಡಿದ್ದವರು ಇಂದು ಸೇಫ್ ಆಗಿದ್ದಾರೆ.
When the voters will vote for a candidate when he is with the Congress and will
vote for him when he defects to BJP,
can we say that Indian politics has acquired a transcendence & formlessness that makes India=Heaven.— P. Chidambaram (@PChidambaram_IN) December 10, 2019