ಕಿಸಾನ್ ಸಮ್ಮಾನ್ ಪಡೆಯಲು ಆಧಾರ್ ಕಡ್ಡಾಯವೇ ..?

ನವದೆಹಲಿ:

    ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಹಣವನ್ನು ಪಡೆಯಲು ರೈತರು ಬ್ಯಾಂಕ್ ಖಾತೆಗಳಿಗೆ  ಆಧಾರ್‌ ಜೋಡಿಸುವ ಅಗತ್ಯವಿದೆ ಎಂದು ಎಕನಾಮಿಕ್ ಟೈಮ್ಸ್ ಒಂದು ಲೇಖನ ತಿಳಿಸಿದೆ. ಆದರೆ ಅಧಿಕಾರಿಗಳಿಂದ ಇನ್ನು ಇದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

   ಇಲ್ಲಿಯವರೆಗೂ ಈ ಯೋಜನೆಗೆ ಸರ್ಕಾರ ಇಲ್ಲಿಯವರೆಗೆ ಯಾವುದೇ ನಿಯಮ ನಿಬಂಧನೆಗಳನ್ನು ವಿಧಿಸಿಲ್ಲ. ನಾಲ್ಕನೇ ಕಂತಿನ ಹಣ ಸಂದಾಯವಾಗುವ ಸಮಯದಲ್ಲಿ  ಆಧಾರ್‌ನೊಂದಿಗಿನ ಬ್ಯಾಂಕಿನ ಖಾತೆಗಳು ಅನುಸಂಧಾನವಾಗಿರಬೇಕು ಎಂದು ತಿಳಿಸಿದೆ. ಪ್ರಸ್ತುತ, ಸರ್ಕಾರವು ಈ ಯೋಜನೆಗಾಗಿ ರೂ .10,000 ಕೋಟಿ ಹಣವನ್ನು ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದು ಇದಕ್ಕಾಗಿ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಬೇಕೆಂದು ಬ್ಯಾಂಕ್ ಗಳು ವದಂತಿ ಸೃಷ್ಠಿಸುತ್ತಿವೆ .

   ಇನ್ನು ಗ್ರಾಮೀಣ ಭಾಗದ ಜನರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆಯೂ ಗ್ರಾಮೀಣರನ್ನು ಆರ್ಥಿಕವಾಗಿ ಬಲಪಡಿಸಲು ಸಹಾಯಕವಾಗಿದೆ ಎನ್ನಲಾಗಿದೆ. ಕಿಸಾನ್ ಸಮ್ಮನ್ ನ ನಾಲ್ಕನೇ ಕಂತು ಖಾತೆಗಳಿಗೆ ಬರಲಿದ್ದು ಎಲ್ಲಾರೈತರು ಮುನ್ನೆಚ್ಚರಿಕಾ ಕ್ರಮವಾಗಿ ಆಧಾರ್ ಜೋಡಣೆ ಮಾಡಿಸಿಕೊಂಡರೆ ರೈತರಿಗೆ ಅನುಕೂಲವಾಗಲಿದೆ ಮತ್ತು ಈ ಯೋಜನೆಯಿಂದ ಒಂದೇ ದಿನದಲ್ಲಿ ಸರಿ ಸುಮಾರು 10,000 ಕೋಟಿ ರೂಗಳನ್ನು ದೇಶದ ನೊಂದಾಯಿತ ರೈತರ ಖಾತೆಗಳಿಗೆ ಹಾಕಲಾಗುತ್ತದೆ ಎಂದು ಹೆಸರೇಳಲಿಚ್ಚಿಸದ ಕೃಷಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆ ಯೋಜನೆಯಡಿ ಸರ್ಕಾರ ರೈತರಿಗೆ 6000 ರೂಗಳನ್ನು ಒಂದು ವರ್ಷಕ್ಕೆ ನೀಡಲಾಗುತ್ತಿದೆ. ಇದನ್ನು 4 ಕಂತುಗಳಲ್ಲಿ ರೈತರಿಗೆ ನೀಡಲಾಗುತ್ತದೆ. ಈ ಕಂತುಗಳಲ್ಲಿನ ನಾಲ್ಕನೇ ಕಂತನ್ನು ಮಾರ್ಚ್ 2019-2020ರೊಳಗೆ ರೈತರಿಗೆ ವರ್ಗಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap