ವಿಜಯವಾಡ:![](https://prajapragathi.com/wp-content/uploads/2019/06/130743-jagan-mohan-reddy.gif)
![](https://prajapragathi.com/wp-content/uploads/2019/06/130743-jagan-mohan-reddy.gif)
ಆಂಧ್ರಪ್ರದೇಶದಲ್ಲಿ ಬಂದಿರುವ ನೂತನ ಸರ್ಕಾರದಿಂದ ರೈತರಿಗೆ ಬರ್ಜರಿ ಕೊಡುಗೆ ಲಭಿಸಿದೆ ಇನ್ನು ಮುಂದೆ ರಾಜ್ಯದ ರೈತರಿಗೆ ಹಗಲಿನಲ್ಲಿ 9 ಗಂಟೆ ವಿದ್ಯುತ್ ಪೂರೈಸುವ ಸಂಬಂಧ ಒಂದು ವಾರದೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಆದೇಶಿಸಿದ್ದಾರೆ.
ರೈತರಿಗೆ 9 ಗಂಟೆ ವಿದ್ಯುತ್ ಪೂರೈಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಜಗನ್ ಮೋಹನ್ ರೆಡ್ಡಿ, 6,663 ಫೀಡರ್ ಗಳ ಮೂಲಕ ಕೃಷಿ ಹಾಗೂ ದೇಶಿ ವಲಯಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಈ ಪೈಕಿ ಶೇ, 60 ರಷ್ಟು 9 ಗಂಟೆ ವಿದ್ಯುತ್ ಪೂರೈಸುವ ಸಾಮರ್ಥ್ಯವನ್ನು ಪಡೆದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/YSR-Congress_Jagan-Reddy-770x433.gif)