ಹಿರಿಯ ಭದ್ರತಾ ಸಲಹೆಗಾರರಾಗಿ ಕೆ ವಿಜಯ ಕುಮಾರ್ ನೇಮಕ

ನವದೆಹಲಿ:

      ಕಾಡುಗಳ್ಳ ವೀರಪ್ಪನ್ ಎನ್ಕೌಂಟರ್ ನ ನೇತೃತ್ವ ವಹಿಸಿದ್ದ (ನಿವೃತ್ತ) ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಅವರನ್ನು ಗೃಹ ಸಚಿವಾಲಯದ ನೂತನ ಹಿರಿಯ ಭದ್ರತಾ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

     ಕರ್ನಾಟಕ ಮತ್ತು ತಮಿಳು ನಾಡಿನ ನಿದ್ದೆ ಕೆಡಿಸಿದ್ದ ನರಹಂತಕ ವೀರಪ್ಪನ್‌ ನನ್ನು 2004ರಲ್ಲಿ ಹತ್ಯೆಗೈದ ಎಸ್‌ಟಿಎಫ್ ನ ಮುಖ್ಯಸ್ಥ ರಾಗಿದ್ದ ಐಪಿಎಸ್‌ ಅಧಿಕಾರಿ ವಿಜಯ ಕುಮಾರ್‌ ಅವರನ್ನು ಇದೀಗ ಗೃಹ ಸಚಿವಾಲಯದ ನೂತನ ಹಿರಿಯ ಭದ್ರತಾ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

     ಇನ್ನು ಈ ಹಿಂದೆ ವಿಜಯ್ ಕುಮಾರ್ ಅವರು 2018ರಿಂದ ಜಮ್ಮು-ಕಾಶ್ಮೀರ ರಾಜ್ಯಪಾಲರ ಸಲಹೆಗಾರರಾಗಿ ವಿಜಯಕುಮಾರ್‌ ಕಾರ್ಯನಿರ್ವಹಿಸುತ್ತಿದ್ದರು. 1975ನೇ ಬ್ಯಾಚಿನ ತಮಿಳುನಾಡು ಕೇಡರ್‌ ಅಧಿಕಾರಿಯಾಗಿರುವ ಅವರು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap