ಪ್ರವಾಹದಲ್ಲಿ ಮಹಾ ಸಚಿವರ ಸೆಲ್ಫಿ ಹುಚ್ಚಾಟ..!!

ಕೊಲ್ಹಾಪುರ

  ಕಳೆದ ಕೆಲ ವಾರಗಳಿಂದ ಸುರಿಯುತ್ತಿರುವ ರಣಭೀಕರ ಮಳೆಯಲ್ಲೂ ಪರಿಹಾರ ಪರಿವಿಕ್ಷಣೆಗೆಂದು ಆಗಮಿಸಿದ್ದ ಮಹಾರಾಷ್ಟ್ರ ಸಚಿವರು ಸಹೋದ್ಯೋಗಿಗಳೊಂದಿಗೆ ‘ವಿಡಿಯೋ ಸೆಲ್ಫಿ’ ತೆಗೆದುಕೊಂಡು  ಆನಂದಿಸುತ್ತಿದ್ದಾರೆ.

   ಅಧಿಕಾರಿಗಳೊಂದಿಗೆ ಪ್ರವಾಹದ ಅನಾಹುತಗಳ ಪರಿಶೀಲನೆಗೆಂದು ಆಗಮಿಸಿದ  ಜಲ ಖಾತೆ ಸಚಿವ ಗಿರೀಶ್ ಮಹಾಜನ್ ತಾವು ಬಂದ ಕೆಲಸವನ್ನೆ ಮರೆತು ತನ್ನ ಸಹೊಧ್ಯೋಗಿಗಳೊಂದಿಗೆ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದರು ಎಂದು ವರದಿಯಾಗಿದೆ.ಮಹಾರಾಷ್ಟ್ರದಲ್ಲಿ ಸಧ್ಯ ಪ್ರವಾಹದಿಂದಾಗಿ 27 ಕ್ಕೂ ಹೆಚ್ಚು ಮಂದಿ ಅಧಿಕೃತವಾಗಿ ಸಾವನ್ನಪ್ಪಿದ್ದಾರೆ. 50,000 ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.

   ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದವರಿಗೆ ನೆರವು ನೀಡಲು ನೌಕಾಪಡೆಯ ಐದು ರಕ್ಷಣಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

   ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯದ ವಿವಿಧ ಭಾಗಗಳಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿ ದರು ಮತ್ತು ಸಂತ್ರಸ್ತರಿಗೆ ಆಹಾರ, ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap