ಮಮತಾ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ: ಬಬುಲ್ ಸುಪ್ರಿಯೊ

ನವದೆಹಲಿ

      ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ ಮತ್ತು ಸಾಲ ಪಡೆದ ಸಮಯುದಿಂದ ಈಗ ಅಧಿಕಾರದಲ್ಲಿ ಉಳಿದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಬುಲ್‌ ಸುಪ್ರಿಯೊ ಹೇಳಿದ್ದಾರೆ.

      ಹೀಗಾಗಿ ಈ ಸಭೆಗಳಿಗೆ ಅವರನ್ನು ಆಹ್ವಾನಿಸಬೇಕಿಲ್ಲ. ಪಶ್ಚಿಮ ಬಂಗಾಳದ ಅಭಿವೃದ್ಧಿಗಿಂತ ಹೆಚ್ಚಾಗಿ ತಮ್ಮ ಸಣ್ಣ ಕೊಳಕು ರಾಜಕೀಯ ಮತ್ತು ವೈಯಕ್ತಿಕ ಅಹಂಕಾರಕ್ಕೆ ಆದ್ಯತೆ ನೀಡುವ ಅವರನ್ನು ಜನ ಯಾವಾಗಲೂ ಕ್ಷಮಿಸುವುದಿಲ್ಲ ಎಂದು ಸುಪ್ರಿಯೊ ಟ್ವೀಟ್‌ ಮಾಡಿದ್ದಾರೆ. ಬ್ಯಾನರ್ಜಿ ಜೂನ್‌.15ರ ನೀತಿ ಆಯೋಗದ ಸಭೆಯಿಂದ ದೂರ ಉಳಿದಿದ್ದರು.

      ಪ್ರಧಾನಿ ನರೇಂದ್ರ ಮೋದಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ನಿರ್ಧಾರ ಮಾಡಲು ಬುಧವಾರ ಸರ್ವ ಪಕ್ಷಗಳ ಸಭೆ ಕರೆದಿದ್ದು, ಅದರಲ್ಲಿ ಭಾಗಿಯಾಗಲು ಎಲ್ಲರಿಗೂ ಆಹ್ವಾನಿಸಿದ್ದಾರೆ. ಆದರೆ ಈ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಮಮತಾ ಮಂಗಳವಾರ ಹೇಳಿಕೆ ನೀಡಿದ್ದಾರೆ.

      ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಬರೆದ ಪತ್ರದಲ್ಲಿ, ‘ ಈ ವಿಷಯವನ್ನು ಅವಸರದಿಂದ ನಿರ್ಧಾರ ಮಾಡುವ ಬದಲು, ಎಲ್ಲಾ ಪಕ್ಷಗಳಿಗೂ ತಮ್ಮ ಅಭಿಪ್ರಾಯಗಳನ್ನು ಆಹ್ವಾನಿಸಿ, ಉತ್ತರಿಸಲು ಸಮರ್ಪಕ ಸಮಯವನ್ನು ನೀಡುವಂತೆ ಈ ಮೂಲಕ ವಿನಂತಿಸುತ್ತೇನೆ ಎಂದು ಮಮತಾ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap