ಮುಂಬೈ
ಮಹಾರಾಷ್ಟ್ರ ನವನಿರ್ಮಾನ್ ಸೇನೆಯಿಂದ ಜಾರಿ ನಿರ್ದೇಶನಾಲಯಕ್ಕೆ ನೊಟೀಸ್ ನೀಡಿದೆ .ಇಡಿ ತನ್ನ ಥಾಣೆಯಲ್ಲಿರುವ ಕಚೇರಿಯ ಫಲಕದ ಮೇಲೆ ಬರಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಹೆಸರನ್ನು ನಮೂದಿಸುವ ಮೂಲಕ ಮರಾಠಿಯನ್ನು ಕಡೆಗಣಿಸಿದೆ ಎಂದು ನೊಟೀಸ್ ನೀಡಿದೆ
ಎಂಎನ್ಎಸ್ ಈ ಬಗ್ಗೆ ಟ್ವೀಟ್ ಮಾಡಿತ್ತು ಮತ್ತು ಅದನ್ನು ಟ್ವಿಟರ್ ನಿಂದಲೆ ತಗೆದು ಹಾಕಲಾಗಿದೆ ,ಅದನ್ನು ಸ್ಥೂಲವಾಗಿ ಅನುವಾದಿಸಿದಾಗ , “ಇಡಿ ಗೆ ಎಂಎನ್ಎಸ್ ಕಡೆಯಿಂದ ಸೂಚನೆ! ನಮ್ಮ ರಾಜ್ಯದ ಆಡಳಿತ ಭಾಷೆ ಮರಾಠಿಯಾಗಿರುವುದರಿಂದ ತಾವುಗಳು ತಮ್ಮ ನಾಮ ಫಲಕವನ್ನು ಮರಾಠಿಯಲ್ಲಿ ಬರೆಸಬೇಕು ಎಂಬ ವಿಷಯ ಇಡಿಗೆ ಮರೆತುಹೋಗಿದೆ ಎಂದು ತೋರುತ್ತದೆ, ಆದರೆ ನಾವು ಅದನ್ನು ಜಿಲ್ಲಾಧಿಕಾರಿಗೆ ವರದಿ ಮಾಡಿದ್ದೇವೆ ಮತ್ತು ಈ ನೋಟಿಸ್ನ ಪ್ರತಿಯನ್ನು ಇಡಿಗೆ ಕಳುಹಿಸಿದ್ದೇವೆ. ಮರಾಠಿ ಭಾಷಾ ಇಲಾಖೆ ಇಡಿಯ ಮೇಲೆ ಏನು ಕ್ರಮ ಕೈಗೊಳ್ಳತ್ತಾರೆ ಎಂದು ಕಾದು ನೋಡುತ್ತೇವೆ ಎಂದು ಅದು ತಿಳಿಸಿದೆ ”
ಆದರೆ ಇದು ಮರಾಠಿಯಲ್ಲಿ ಬರೆಯಲಾಗಿಲ್ಲ ಎಂದು ತೋರುತ್ತದೆ. ಐಎಲ್ ಮತ್ತು ಎಫ್ಎಸ್ ಹಗರಣದಲ್ಲಿ ರಾಜ್ ಠಾಕ್ರೆ ಅವರನ್ನು 8 ಗಂಟೆಗಳ ಕಾಲ ಇಡಿ ಸತತ ವಿಚಾರಣೆ ನಡೆಸಿದ ನಂತರ ಈ ಟ್ವೀಟ್ ಬಂದಿದೆ.ರಾಜ್ ಠಾಕ್ರೆ ಅವರು ಬೆಳಿಗ್ಗೆ 11: 30 ರ ಸುಮಾರಿಗೆ ಇಡಿಯ ಬಲ್ಲಾರ್ಡ್ ಎಸ್ಟೇಟ್ ಕಚೇರಿಗೆ ಆಗಮಿಸಿದರು, ನಂತರ ಅವರನ್ನು ಕಟ್ಟಡದ ಮೊದಲ ಮಹಡಿಯಲ್ಲಿರುವ ಕಚೇರಿಯಲ್ಲಿ ಪ್ರಶ್ನಿಸಲಾಯಿತು ಎಂದು ತಿಳಿದು ಬಂದಿದೆ.
ಮುಂಬೈನ ದಾದರ್ ಪ್ರದೇಶದಲ್ಲಿ ಕೊಹಿನೂರ್ ಸ್ಕ್ವೇರ್ ಟವರ್ ಅನ್ನು ಅಭಿವೃದ್ಧಿಪಡಿಸುತ್ತಿರುವ ಕೊಹಿನೂರ್ ಸಿಟಿಎನ್ಎಲ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯಲ್ಲಿ ಐಎಲ್ ಮತ್ತು ಎಫ್ಎಸ್ ಕಂಪನಿಯಿಂದ 450 ಕೋಟಿ ರೂ. ಮೌಲ್ಯದ ಸಾಲ ಮತ್ತು ಇಕ್ವಿಟಿ ಹೂಡಿಕೆಯ ಅಕ್ರಮಗಳನ್ನು ಇಡಿ ಪರಿಶೀಲಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
