ನವದೆಹಲಿ
ದೇಶದ ಅತಿ ಚರ್ಚಾಸ್ಪದ ವಿಷಯವಾದ ರಫೇಲ್ ಡಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಅಗತ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪು ಸಂತೋಷ ತಂದಿದ್ದು ದೇಶದ ಭದ್ರತೆಯ ವಿಷಯದಲ್ಲಿ ರಾಜಕೀಯ ತರಬಾರದು ಎಂಬ ತೀರ್ಪು ಸ್ವಾಗತಾರ್ಹ ಎಂದಿದ್ದ ವಾಯುಪಡೆ ಮುಖ್ಯಸ್ಥರ ಮೇಲೆ ವಾಆಗ್ದಾಳಿ ನಡೆಸಿದ ವೀರಪ್ಪ ಮೊಯ್ಲಿರಫೇಲ್ ವಿಮಾನಗಳ ಖರೀದಿಯಲ್ಲಿ ಧಾನೋವಾ ಸುಳ್ಳು ಹೇಳುತ್ತಿದ್ದು ದೊಡ್ಡ ಹಗರಣ ನಡೆದಿರುವ ಸಂಶಯ ಮೂಡುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ರಫೇಲ್ ಯುದ್ಧ ವಿಮಾನ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಧಾನೋವಾ ಅವರು ಎಚ್ ಎ ಎಲ್ ಗೆ ಆಗಮಿಸಿದ್ದರು. ಅದೂ ಅಲ್ಲದೆ, ಧಾನೋವಾ ಅವರೊಂದಿಗೆ ಡಸಾಲ್ಟ್ ಕಂಪನಿಯ ಮುಖ್ಯಸ್ಥರೂ ಜೊತೆಯಾಗಿದ್ದರು” ಎಂಬ ವಿಷಯವನ್ನು ಮೊಯ್ಲಿ ಪ್ರಸ್ತಾಪಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








