“ಮಾ” ವೇದಿಕೆಯಲ್ಲಿ ಮತ್ತೆ ಭುಗಿಲೆದ್ದ ಚಿರು ರಾಜ್ ಮನಸ್ತಾಪ

ಹೈದರಾಬಾದ್ :

    ತೆಲುಗು ಚಿತ್ರರಂಗದ ಮೇರು ನಟರಾದ ಚಿರಂಜೀವಿ ಮತ್ತು ನಟ ರಾಜಶೇಖರ್ ನಡುವಿನ ಮನಸ್ತಾಪ ಚಿತ್ರರಂಗಕ್ಕೆ ಹೊಸತೇನಲ್ಲ.ಸದ್ಯಕ್ಕೆ ಇಬ್ಬರ ನಡುವಿನ ಮನಸ್ತಾಪ ಆಗಾಗ ಟಾಲಿವುಡ್ ನಲ್ಲಿ ಪುಟಿದೇಳುತ್ತಲೇ ಇರುತ್ತದೆ.ಆದರೆ ಎಂಧಿಗೂ ಒಂದೇ ವೇದಿಕೆಯಲ್ಲಿ ಸಂಧಿಸದ ಇಬ್ಬರು ಮಾ ಡೈರಿ ವೇದಿಕೆಯಲ್ಲಿ ಚಿರಂಜೀವಿ ಮತ್ತು ರಾಜಶೇಖರ್ ಮಧ್ಯೆ ವಾಗ್ವಾದ ನಡೆದಿದೆ.

   ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನೇತೃತ್ವದಲ್ಲಿ ನಡೆದ ‘ಮಾ’ ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಚಿರಂಜೀವಿ ಎದುರಿಗೆ ತೆಲುಗು ಚಿತ್ರರಂಗದ ಬಗ್ಗೆ ನಟ ರಾಜಶೇಖರ್ ತಮ್ಮಲ್ಲಿದ್ದ ಅಸಮಾಧಾನವನ್ನ ಹೊರಗೆ ಹಾಕಿದರು.

    ರಾಜಶೇಖರ್ ರನ್ನ ತಡೆಯಲು ಯಾರು ಎಷ್ಟೇ ಪ್ರಯತ್ನ ಪಟ್ಟರೂ, ಅವರು ಸುಮ್ಮನಾಗಲಿಲ್ಲ. ರಾಜಶೇಖರ್ ವರ್ತನೆಯಿಂದ ಚಿರಂಜೀವಿ ಗರಂ ಆದರು. ರಾಜಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ‘ಮಾ’ಗೆ ಚಿರಂಜೀವಿ ಸೂಚಿಸಿದರು. ಈ ಘಟನೆ ಬಳಿಕ ‘ಮಾ’ ಉಪಾಧ್ಯಕ್ಷ ಸ್ಥಾನಕ್ಕೆ ರಾಜಶೇಖರ್ ರಾಜೀನಾಮೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link