ಪಾಕಿಸ್ತಾನದಿಂದ ರಾಜಸ್ಥಾನ ಗಡಿಯಲ್ಲಿ ಸೈನಿಕರ ಜಮಾವಣೆ.!

ನವದೆಹಲಿ:

     ಭಾರತದ ರಾಜಸ್ತಾನ ಗಡಿಯಲ್ಲಿ ಪಾಕಿಸ್ಥಾನ ಹೆಚ್ಚುವರಿ ಸೈನಿಕರನ್ನು ನಿಯೋಜಿಸುತ್ತಿದೆ ಪಾಕಿಸ್ತಾನ ಯುದ್ಧದ ಻ಮಲಿನಿಂದ ಇನ್ನು ಹೊರಬಂದಂತೆ ಕಾಣುತ್ತಿಲ್ಲ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ವರದಿ ಮುಟ್ಟಿಸಿದೆ.

    ಗಡಿಯಲ್ಲಿ ಸೈನಿಕರನ್ನು ಜಮಾವಣೆ ಮಾಡುತ್ತಿರುವ ಪಾಕಿಸ್ತಾನ ಆಂತರಿಕವಾಗಿ ಭಯೋತ್ಪಾದಕ ದಾಳಿ ನಡೆಸಿ ಆಶಾಂತಿ ವಾತವರಣ ನಿರ್ಮಾಣ  ಮಾಡಲು ಇಸ್ಲಾಮಾಬಾದ್ ಮೂಲದ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ನನ್ನು ರಹಸ್ಯವಾಗಿ ಬಿಡುಗಡೆ ಮಾಡಿದೆ ಎಂದೂ ತಿಳಿದು ಬಂದಿದೆ.   

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತ್ತಿ ಕ್ರಮಕ್ಕೆ ಪ್ರತೀಕಾರವಾಗಿ ಸೇಡು ತೀರಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಸಿಯಾಲ್ಕೋಟ್-ಜಮ್ಮು ಮತ್ತು ರಾಜಸ್ತಾನ ಗಡಿಯಲ್ಲಿ  ಪಾಕಿಸ್ತಾನ ದೊಡ್ಡ ಮಟ್ಟದ ದಾಳಿಗೆ ಸಜ್ಜಾಗುತ್ತಿದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿದೆ. 

  ಇದಕ್ಕೆ ಇಂಬು ಕೊಡುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜಾವೇದ್ ಬಜ್ವಾ ಅವರು ನಾವು ಎಂತಹ ಪರಿಸ್ಥಿತಿಯನ್ನಾದರೂ ಎದುರಿಸಲು ನಾವು ಸದಾ ಸಿದ್ದರಿದ್ದೇವೆ ಹಾಗು ನಮ್ಮ ಗುರಿ ಮುಟ್ಟಲು ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ದವಾಗಿದ್ದೇವೆ ಎಂದಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap