ಶ್ರೀನಗರ
ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದಾದ ನಂತರ ಬಂದ ಮೊದಲ ಹಬ್ಬವಾದ ಬಕ್ರಿದ್ ಅನ್ನು ಜಮ್ಮು ಮತ್ತು ಕಾಶ್ಮೀರದ ಜನತೆ ಶಾಂತಿಯುವಾಗಿ ಆಚರಿಸಿದ್ದಾರೆ ಇಂದು ಮುಂಜಾನೆಯಿಂದಲೇ ಮುಸಲ್ಮಾನರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡುಬಂತು.
ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ”ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್ನ ಮೂಲಕ ತಿಳಿಸಿದ್ದಾರೆ.
ಒಂದು ವಾರವಾದರು ರಾಜ್ಯದಲ್ಲಿ ಇನ್ನೂ ಸಹಿತ ಸಂವಹನ ಮತ್ತು ಇಂಟರ್ನೆಟ್ ಬಂದಾಗಿದೆ.ಸದ್ಯ ಕಾಶ್ಮೀರದ ಜನತೆ ಸಣ್ಣ ಗುಂಪುಗಳಲ್ಲಿ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಲು ಅವಕಾಶ ನೀಡಿಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಕ್ರಿದ್ ಹಬ್ಬದವಾದ್ದರಿಂದ ಶ್ರೀನಗರದಲ್ಲಿ ಸರಿಸುಮಾರು 250 ಕ್ಕೂ ಹೆಚ್ಚು ಎಟಿಎಂಗಳು ಸಕ್ರಿಯಾವಾಗಿದ್ದವು .ಅಲ್ಲಲ್ಲಿ ಪ್ರತಿಭಟನೆ ವರದಿ ಬಂದರೂ ಹಿಂಸಾಚಾರ ಎಲ್ಲಿಯೂ ವರದಿಯಾಗಿಲ್ಲ ಮತ್ತು ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸಲು ಅಧಿಕಾರಿಗಳು ಮೊಬೈಲ್ ವ್ಯಾನ್ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/08/kashmir-2.gif)