ಪ್ರಧಾನಿ ಅವರ ಮನಸ್ಸಿನಲ್ಲಿರುವುದನ್ಜು ಹೇಳಿದ್ದಾರೆ : ಮಮತಾ ಬ್ಯಾನರ್ಜಿ

ಕೋಲ್ಕತ್ತಾ:

        ಪ್ರಧಾನಿಯವರು ಭಾನುವಾರದ ದಿನ ರಾತ್ರಿ ಮೇಣದ ಬತ್ತಿಗಳನ್ನು ಹತ್ತಿಸುವ ಮೂಲಕ ಕೊರೋನಾ ವಿರುದ್ಧ ದೇಶದ ಒಗ್ಗಟ್ಟನ್ನು ಪ್ರದರ್ಶಿಸಿ ಎಂದು ಕರೆ ಕೊಟ್ಟ ಬೆನ್ನಲ್ಲೇ . ಇದರ ಕುರಿತು ಪ್ರತಿಕ್ರಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ “ನಾನಿದನ್ನು ರಾಜಕೀಯಗೊಳಿಸುವುದಿಲ್ಲ, ನನ್ನ ವೈಯುಕ್ತಿಕ ಇಚ್ಚೆಯಂತಿರುತ್ತೇನೆ. ಇಷ್ಟವಾದರೆ ಆ ಸಮಯದಲ್ಲಿ ನಿದ್ರಿಸುತ್ತೇನೆ” ಎಂದು ತಿಳಿಸಿದ್ದಾರೆ.

     ಪ್ರಧಾನಮಂತ್ರಿಯವರ ಸಂದೇಶವನ್ನು ಪಾಲಿಸುವವರು ಅವರ ಸೂಚನೆಗಳನ್ನು ಅನುಸರಿಸಬಹುದು , “ಪ್ರಧಾನಿ ತಮ್ಮ ಮನಸ್ಸಿನಲ್ಲಿರುವುದನ್ನು ಹೇಳೀದ್ದಾರೆ. ನಾನು ನನ್ನ ಮಾತನ್ನು ಹೇಳುತ್ತೇನೆ. ನಾನು ಬೇರೊಬ್ಬರ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ…. ಪ್ರಧಾನಿ ಏನಾದರೂ ಒಳ್ಳೆಯದನ್ನು ಹೇಳಿದ್ದಾರೆ ಎಂದು ನೀವು ಭಾವಿಸಿದರೆ, ಅದನ್ನು ಅನುಸರಿಸಿ… ಇದು ವೈಯಕ್ತಿಕ ನಿರ್ಧಾರ, ”ಮಮತಾ ಹೇಳಿದರು.

   “ನಾನು ಇತರರ ವಿಷಯಗಳಲ್ಲಿ ಏಕೆ ಹಸ್ತಕ್ಷೇಪ ಮಾಡಬೇಕು? ನಾನು ಕೊರೋನಾವೈರಸ್ ಅನ್ನು ನಿಭಾಯಿಸಬೇಕೇ ಅಥವಾ ರಾಜಕೀಯ ಸ್ಪರ್ಧೆಯು ಹೆಚ್ಚಾಗಿದೆ ಎಂದು ಆಲೋಚಿಸಬೆಕೇ? ಇದರಲ್ಲಿ ದಯವಿಟ್ಟು ರಾಜಕೀಯ ಸ್ಪರ್ಧೆಗೆ ಅವಕಾಶ ಕೊಡಬೇಡಿ. ಪ್ರಧಾನಿ ಹೇಳಿದ್ದನ್ನು ಒಳ್ಳೆಯದು ಎಂದು ನೀವು ಭಾವಿಸಿದರೆ, ನೀವು ಅದನ್ನು ಅನುಸರಿಸುತ್ತೀರಿ. ನಾನು ನನ್ನಿಚ್ಚೆಯಂತೆ ಮಾಡುತ್ತೇನೆ. “
    ದೇಶದಲ್ಲಿ ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ರಾಜಕೀಯ ಸ್ಪರ್ಧೆಯನ್ನು  ಪ್ರಚೋದಿಸಬೇಡಿ ಎಂದು ಮಾಧ್ಯಮಗಳಿಗೆ ದೀದಿ ವಿನಂತಿ ಮಾಡಿದ್ದಾರೆ.ಇದೀಗ ಪ್ರಸ್ತುತ ನಡೆಯುತ್ತಿರುವ ಲಾಕ್‌ಡೌನ್‌ನಿಂದಾಗಿ ಪಶ್ಚಿಮ ಬಂಗಾಳವು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆ ಎಂದ ಮಮತಾ  ತಮ್ಮ ಸರ್ಕಾರವು ನೌಕರರ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡುವಲ್ಲಿ ಯಶಸ್ವಿಯಾಗಿದೆ ಎಂಬ ಬಗ್ಗೆ  ಹೆಮ್ಮೆ ಇದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link