ಬಂಡಾ:
ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಅಲ್ಲಾ ಅವರು ಪ್ರಧಾನ ಪ್ರಚಾರ ಮಂತ್ರಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ .
ಬಿಜೆಪಿ ಪಕ್ಷವೂ ಸಮಾವೇಶ ನಡೆಯುವ ಬಂಡಾ ಮತ್ತು ಅರಿಡ್ ನ ರಸ್ತೆಗಳನ್ನು ಕುಡಿಯುವ ನೀರಿನಿಂದ ಸ್ಪಚ್ಛಗೊಳಿಸುವ ಮೂಲಕ ಕುಡಿಯುವ ನೀರನ್ನು ವ್ಯರ್ಥ ಮಾಡುತ್ತಿದೆ ಅದರ ಬದಲು ಬಡವರ ಮನೆಗಳಿಗೆ ಆ ನೀರನ್ನು ಕೊಡಬಹುದಿತ್ತು ಎಂದು ತಿಳಿಸಿದ್ದಾರೆ.
ಒಂದು ಕಡೆ ಬುಂದೇಲ್ ಖಂಡದಲ್ಲಿ ಮನುಷ್ಯರು, ಪ್ರಾಣಿ, ಪಕ್ಷಿಗಳು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಪ್ರಧಾನ ಮಂತ್ರಿ ಅವರ ಸ್ವಾಗತಕ್ಕಾಗಿ ಜನರು ಕುಡಿಯುವ ನೀರಿನಿಂದ ರಸ್ತೆಗಳನ್ನು ಸ್ವಚ್ಛಗೊಳಿಸುವ ಮೂಲಕ ವ್ಯರ್ಥ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
जब पूरा बुंदलेखंड, वहाँ के नर नारी, स्कूलों के बच्चे, फसलें और पशु-पक्षी भयंकर सूखे का आतंक झेल रहे हैं हमारे प्रधान प्रचारमंत्री के स्वागत में पीने का पानी टैंकरों से बाँदा की सड़कों पर उड़ेला जा रहा है। यह चौकीदार हैं या दिल्ली से पधारे कोई शहंशाह? pic.twitter.com/LV4IYuwn2g
— Priyanka Gandhi Vadra (@priyankagandhi) April 23, 2019
ಮೋದಿ ಚೌಕಿದಾರರೋ ಅಥವಾ ಚಕ್ರವರ್ತಿನೋ? ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಕ್ಷೇತ್ರ ವಾರಣಾಸಿ ಪ್ರವಾಸದಲ್ಲಿದ್ದು, ಸುಮಾರು 6 ಕಿ.ಮೀ.ವರೆಗೆ ಭರ್ಜರಿ ರೋಡ್ ಶೋ ನಡೆಸುತ್ತಿದ್ದಾರೆ. ಬಳಿಕ ಬುಂದೇಲ್ ಖಂಡ ಬಂಡಾ ಪ್ರದೇಶದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
