ನವದೆಹಲಿ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಲ್ಲಿ ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾರ್ದಾ, ಬಾಕಿ ಇರುವ ಮುಂದಿನ ಎರಡು ಹಂತಗಳ ಚುನಾವಣೆಯನ್ನು ಮೋದಿಯವರು ನೋಟು ನಿಷೇಧ ಮತ್ತು ಮಹಿಳೆಯರ ಸುರಕ್ಷತೆ ವಿಷಯದಲ್ಲಿ ಪ್ರಸ್ತುತ ಸರ್ಕಾರ ನೀಡಿದ್ದ ಭರವಸೆಗಳ ಮೇಲೆ ಎದುರಿಸಲಿ ಎಂದು ಪ್ರತಿಸವಾಲು ಹಾಕಿದ್ದಾರೆ.
ಎನ್ಡಿಎ ಸರ್ಕಾರ ಈಡೇರಿಸಿದ ಭರವಸೆಗಳ ಆಧಾರದ ಮೇಲೆ ಇನ್ನುಳಿದ ಎರಡು ಹಂತಗಳ ಚುನಾವಣೆಯನ್ನು ಮೋದಿ ಎದುರಿಸಲಿ ಎಂದು ಪ್ರಿಯಾಂಕಾ ಖರ್ಗೆ ಸವಾಲು ಹಾಕಿದರು.ನೋಟು ನಿಷೇಧ, ರೈತರ ಸಮಸ್ಯೆ, ಮಹಿಳಾ ಸುರಕ್ಷತೆಯ ಮೇಲೆ ಇನ್ನುಳಿದ ಎರಡು ಹಂತಗಳ ಚುನಾವಣೆಯನ್ನು ಎದುರಿಸಲು ಈ ದೆಹಲಿಯ ಹುಡುಗಿ ಸವಾಲು ಹಾಕುತ್ತಿದ್ದೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರಾಷ್ಟ್ರ ರಾಜಧಾನಿಯಲ್ಲಿ ಏರ್ಪಡಿಸಿದ್ದ ಬೃಹತ್ ರೋಡ್ ಶೋದಲ್ಲಿ ಮಾತನಾಡಿದ ವಾದ್ರಾ, ನಿಮ್ಮ ಮಾತು ಕೇಳುವ, ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸುವವರನ್ನು ಆಯ್ಕೆ ಮಾಡಿ ಎಂದು ಹೇಳಿದರು.ಪ್ರತಿಯೊಬ್ಬರೂ ಬಹಳಷ್ಟು ತಾಳ್ಮೆ ವಹಿಸಿದ್ದಾರೆ. ಈಗ ಬದಲಾವಣೆಯ ಸಮಯ ಬಂದಿದೆ ಎಂದು ಪ್ರಿಯಾಂಕಾ ಮಾರ್ಮಿಕವಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/priyanka-gandhi-congress.gif)