ನವದೆಹಲಿ:

ಕೇಂದ್ರ ಸರ್ಕಾರದ ಮುಜುಗರಕ್ಕೆ ಕಾರಣವಾಗಿದ್ದ ರಫೆಲ್ ಡೀಲ್ ನ ತೀರ್ಪು ಹೊರಬಂದ ಕೂಡಲೆ ಸುದ್ದಿ ಘೋಷ್ಟಿ ನಡೆಸಿದ ಶಾ ತಮ್ಮ ಸರ್ಕಾರದ ವಿರುದ್ದ ಕಾಂಗ್ರೇಸ್ ಯುವರಾಜ ಎನ್ನಿಸಿಕೊಂಡಿರುವ ರಾಹುಲ್ ಗಾಂಧಿ ಯಾವ ಆಧಾರದ ಮೇಲೆ ನಮ್ಮ ಮೇಲೆ ಈ ಆರೋಪ ಮಾಡಿದ್ದಿರಿ? ಎಂದು ಪ್ರಶ್ನಿಸಿದ್ದಾರೆ .
ರಫೇಲ್ ಒಪ್ಪಂದ ಕುರಿತು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅಮಿತ್ ಶಾ ಅವರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ ಮತ್ತು ಸುಳ್ಳು ಆರೋಪ ಮಾಡುವವರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ಹೇಳಿದ್ದಾರೆ ಮತ್ತು ಆಧಾರ ರಹಿತ ಆರೋಪ ಮಾಡಿ ದೇಶದ ಜನತೆಯ ದೃಷ್ಟಿಯಲ್ಲಿ ರಾಹುಲ್ ಗಾಂಧಿ ಒಬ್ಬ ದೊಡ್ಡ ಸುಳ್ಳುಗಾರ .
ಸುಪ್ರೀಂಕೋರ್ಟ್ ಆದೇಶದಿಂದ ಒಪ್ಪಂದದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲ ಎಂಬುದು ಸಾಬೀತಾಗಿದೆ ಮತ್ತು ನಿಮ್ಮ ಅವಧಿಯಲ್ಲೇ ಮುಗಿಯಬೇಕಿದ್ದ ಒಪ್ಪಂದ ಯಾಕೆ ಮುಗಿಸಲು ನಿಮ್ಮಿಂದ ಸಾಧ್ಯವಾಗಿರಲಿಲ್ಲ. ನೀವು ಚಿಕ್ಕ ಮಕ್ಕಳ ರೀತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೇ ದೇಶದ ಜನತೆಯ ದಾರಿ ತಪ್ಪಿಸಿದ್ದಿರಾ ಮತ್ತು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಮಾಡಿರುವಂತಹ ನಿಮ್ಮ ಆರೋಪವನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ಸುಳ್ಳು ಎಂದು ಹೇಳುವ ಮೂಲಕ ನಿಮ್ಮ ಅಸಲಿ ಮುಖವನ್ನು ಜನತೆಗೆ ತೋರಿಸಿದೆ ಮತ್ತು ರಾಹುಲ್ ಗಾಂಧಿ ಮಾಡಿರುವ ತಪ್ಪಿಗೆ ಕ್ಷಮೆಯಾಚಿಸಬೇಕು ಮತ್ತು ತಮ್ಮ ಆರೋಪಕ್ಕೆ ಇಂಬು ಕೊಡುವಂತಹ ಸಾಕ್ಷಗಳ ಆಧಾರವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
