ಅಹಮಾದಾಬಾದ್:
ರಾಜಕೀಯ ಚಾಣಕ್ಯ ಹಾಗೂ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಉಕ್ಕಿನ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧಗೊಂಡಿದೆ .
ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ವೇಳೆ ಸಂಗ್ರಹಿಸಿದ್ದ ಕಬ್ಬಿಣದಿಂದ ಈ ಪ್ರತಿಮೆಯನ್ನು ಮಾಡಲಾಗಿದೆ. ಶ್ರೀ ವಲ್ಲಭಭಾಯಿ ಪಟೇಲರ 143ನೇ ಹುಟ್ಟುಹಬ್ಬದ ದಿನವಾದ ಇಂದು ‘ಏಕತೆಯ ಪ್ರತಿಮೆ’ ಲೋಕಾರ್ಪಣೆಯಾಗಲಿದೆ.
ಗುಜರಾತ್ನ ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟು ಸಮೀಪ ಈ ಮೂರ್ತಿ ನಿರ್ಮಾಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ. ಪ್ರತಿಷ್ಠಿತ ಎಲ್ ಆಂಡ್ ಟಿ ಸಂಸ್ಥೆಯು ಪಟೇಲ್ ಮೂರ್ತಿಯನ್ನು ನಿರ್ಮಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
