ರಾಂಚಿ
ಭಾರತದಲ್ಲಿ ನಿಷೇಧಿತ ಉಗ್ರ ಸಂಘಟನೆ ಅಲ್ ಖೈದಾದ ಮೋಸ್ಟ್ ವಾಂಟೆಡ್ ಉಗ್ರನಾದ ಮೊಹ್ಮದ್ ಕಲೀಮುದ್ದೀನ್ ಮುಜಾಹಿರಿಯನ್ನು ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ ಇಂದು ಜಮ್ಷೆಡ್ ಪುರ್ ದಲ್ಲಿ ಬಂಧಿಸಿದೆ. ಎಸ್ಪಿ ವಿಜಯಲಕ್ಷ್ಮಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಕಾರ ಕಲೀಮುದ್ದೀನ್ ಭಾರತದ ಪೂರ್ವ ಭಾಗದಲ್ಲಿ ಅಲ್ ಕೈದಾದ ಜವಾಬ್ದಾರಿ ವಹಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಜನರನ್ನು ಉಗ್ರವಾದಕ್ಕೆ ಪ್ರಚೋದಿಸುತ್ತಿದ್ದ ಮತ್ತು ಅದೇ ಮನಸ್ತತ್ವದ ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳುವುದು ಆತನ ಪ್ರಾಥಮಿಕ ಜವಾಬ್ದಾರಿ ಆಗಿತ್ತು ಎಂದು ತಿಳಿಸಿದ್ದಾರೆ. ಯಾರು ತಮ್ಮ ಸಂಘಟನೆಯ ಕೃತ್ಯಗಳಿಗೆ ಸೂಕ್ತ ವ್ಯಕ್ತಿಗಳು ಎನಿಸುತ್ತದೋ ಅಂಥವನ್ನು ಪಾಕಿಸ್ತಾನದಲ್ಲಿ ಇರುವ ಅಲ್ ಕೈದಾ ಹಾಗೂ ಇಂಡಿಯನ್ ಮುಜಾಹಿದೀನ್ ನ ತರಬೇತಿ ಶಿಬಿರಗಳಿಗೆ ಕಳುಹಿಸುತ್ತಿದ್ದ.
ಈತ ಹಲವಾರು ಯುವಕರನ್ನು ಜಿಹಾದಿಗಳಾಗಿ ಪರಿವರ್ತಿಸಿ ನೇಮಿಕ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ. ಆ ಪೈಕಿ ಹಲವರು ಜೈಲು ಸೇರಿದ್ದಾರೆ. ಮತ್ತೆ ಕೆಲವರು ವಿದೇಶಗಳಲ್ಲಿ ತರಬೇತಿಯಲ್ಲಿ ಇದ್ದಾರೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇನ್ನು ಕಲೀಮುದ್ದೀನ್ ಸೌದಿ ಅರೇಬಿಯಾ, ಆಫ್ರಿಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವೆಡೆ ಸುತ್ತಾಡಿದ್ದಾನೆ. ವಿಚಾರಣೆ ವೇಳೆ ಹಲವು ಮಹತ್ವದ ವಿಷಯಗಳ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/09/alqaeda-1569154483.gif)