ಮುಂಬಯಿ:
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಡಾ.ಬಿಆರ್ ಅಂಬೇಡ್ಕರ್ ಮತ್ತು ವೀರ್ ಸಾವರ್ಕರ್ ಅವರ ಬಗ್ಗೆ ಅಸೂಯೆ ಪಡುತ್ತಿದ್ದರು ಎಂದು ಆರೋಪಿಸಿ ದ್ದಾರೆ.
ನೆಹರು ಅವರು ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದರು.ಸದಾ ಬೇರೆಯವರ ಏಳ್ಗೆ ಬಗ್ಗೆ ಅಸೂಯೆ ಪಡುತ್ತಿದ್ದರು, ಅಂಬೇಡ್ಕರ್ ಕೊಲಂಬಿಯಾಗೆ ತೆರಳಿ ಪಿಎಚ್ ಡಿ ಪಡೆದಿದ್ದರಿಂದ ಅವರ ಮೇಲೆ ಹೊಟ್ಟಿಕಿಚ್ಚು ಪಡುತ್ತಿದ್ದರು.ಜೊತೆಗೆ ಕಾನೂನು ಪದವಿ ಪಡೆದು ವಾಪಸ್ ಬಂದರು, ಅವರು ಬಂದ ಮೇಲೆ ಸಂವಿಧಾನ ತಿದ್ದುಪಡಿ ಸಮಿತಿಗೆ ಅಧ್ಯಕ್ಷರಾಗಿ ನೇಮಕವಾದರು. ಇದಾದ ನಂತರ ನೆಹರು ಕೇಂಬ್ರಿಡ್ಜ್ ಗೆ ತೆರಳಿ ವಿಫಲರಾಗಿ ವಾಪಸಾದರು.
ವೀರ್ ಸಾವರ್ಕರ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮಿ, ನೆಹರು ಸಾವರ್ಕರ್ ಅವರ ಬಗ್ಗೆಯೂ ಅಸೂಯೆ ಹೊಂದಿದ್ದರು, ಸಾವರ್ಕರ್ ಒಬ್ಬ ಪಂಡಿತ. ನೆಹರು ತಮ್ಮ ಹೆಸರಿನ ಮುಂದೆ ತಾವೇ ಪಂಡಿತ ಎಂದು ಸೇರಿಸಿಕೊಂಡರು ಎಂದ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/01/BJP-leader-Subramanian-Swamy-770x433-770x433.gif)