ಸರ್ಕಾರದ ಹಣ ಮಂದಿರ ಕಟ್ಟಲು ಯೋಗ್ಯವಲ್ಲ : ನಿಶ್ಚಲಾನಂದ ಸ್ವಾಮೀಜಿ

ಭೋಪಾಲ್ :

    ಸುಪ್ರೀಂಕೋರ್ಟ್ ಆದೇಶದಂತೆ ಮಂದಿರ ಕಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ ವಿರುದ್ಧ ಪ್ರತಿಕ್ರಿಯೆ ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. 
  
   ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಕೆಂದ್ರ ಸರ್ಕಾರ ನೀಡುವ  ಹಣ ಯೋಗ್ಯವಲ್ಲ ಮತ್ತು ಅದು ಅಪವಿತ್ರವಾಗಿದೆ  ಎಂದು ಹೇಳಿದ್ದಾರೆ. ಭವ್ಯ ರಾಮಮಂದಿರ ಕೇವಲ ಜನರ ಹಣ ಹಾಗೂ ಅವರ  ಬೆಂಬಲದಿಂದ  ಮಾತ್ರ ನಿರ್ಮಾಣ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ರಾಮ ಮಂದಿರ ನಿರ್ಮಾಣ  ಕಾರ್ಯವನ್ನು ಕೇಂದ್ರ ಸರ್ಕಾರ ಕೂಡಲೇ ರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.  
  
   ದೇಗುಲ ನಿರ್ಮಾಣದ ಭೂಮಿಯನ್ನು ಕೂಡಲೇ ಜನರಿಗೆ ಹಸ್ತಾಂತರಿಸುವಂತೆ  ಆಗ್ರಹಿಸಿ ತಾವು ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಬರೆದಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap