ನ್ಯಾಯಾಂಗ ವ್ಯವಸ್ಥೆಯಲ್ಲೂ ಮೀಸಲಾತಿಗೆ ಕೇಂದ್ರ ಸಚಿವರ ಆಗ್ರಹ

ನವದೆಹಲಿ

    ಸುಪ್ರೀಂಕೋರ್ಟ್‌ನಲ್ಲಿ  ಘಟಿಸುತ್ತಿರುವ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿರಿಸಿ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಮೀಸಲಾತಿ ವ್ಯವಸ್ಥೆಯನ್ನು ತರಬೇಕೆನ್ನುವ ಕೂಗು ಕೇಳಿಬರುತ್ತಿದ್ದು.ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಸುಮಾರು 70ಕ್ಕೂ ಅಧಿಕ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಂಸದರು ನ್ಯಾಯಾಂಗದಲ್ಲಿಯೂ ಮೀಸಲಾತಿ ವ್ಯವಸ್ಥೆ ತರಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದಾರೆ.

    ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಮನೆಯಲ್ಲಿ ಫೆಬ್ರವರಿ 10ರಂದು ಈ ಸಂಬಂಧ ಸಭೆ ನಡೆದಿತ್ತು.

     ಭಾರತೀಯ ಲೋಕಸೇವಾ ಆಯೋಗ ಮತ್ತು ಇತರೆ ಸಂಸ್ಥೆಗಳಲ್ಲಿ ನೇಮಕ ಪ್ರಕ್ರಿಯೆ ನಡೆಯುವಂತೆ ನ್ಯಾಯಾಂಗಕ್ಕೂ ಪ್ರತ್ಯೇಕ ನೇಮಕ ಪ್ರಕ್ರಿಯೆ ನಡೆಯಬೇಕು. ಭಾರತೀಯ ನ್ಯಾಯಾಂಗ ಪ್ರಕಾರ ಆಯೋಗ ಅಥವಾ ಅದೇ ರೀತಿಯ ಸ್ವತಂತ್ರ ಸಂಸ್ಥೆಗಳನ್ನು ಆರಂಭಿಸಿ ಸಂವಿಧಾನದಂತೆ ಮೀಸಲಾತಿ ವ್ಯವಸ್ಥೆ ಮೂಲಕ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap