ಮುಂಬೈ:
ಮುಂಬೈ:
ಮಹಾರಾಷ್ಟ್ರ ಚುನಾವಣೆಯಲ್ಲಿ ಜಯಗಳಿಸಿದ ನಂತರ ಶೀವಸೇನೆ ಪ್ರತಿಪಾದಿಸುತ್ತಿರುವ ಬೇಡಿಕೆಗಳನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ .
ಚುನಾವಣೆಗೆ ಮೊದಲು, ಮೈತ್ರಿ ಗೆದ್ದರೆ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಹೇಳಿದ್ದೆವು. ಆಗ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಈಗ ಅವರು ನಮಗೆ ಸ್ವೀಕಾರಾರ್ಹವಲ್ಲದ ಹೊಸ ಬೇಡಿಕೆಗಳೊಂದಿಗೆ ಬಂದಿದ್ದಾರೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಮ್ಮ ಪಕ್ಷದ ಮೇಲೆ ಮಾಡುತ್ತಿರುವ ಅಪವಾದಗಳನ್ನು ಖಂಡಿಸಿದರು. ಗೌಪ್ಯ ಮಾಹಿತಿ ಹಾಗು ಮೈತ್ರಿಯ ಕರಾರುಗಳನ್ನು ಬಹಿರಂಗಪಡಿಸುವುದು ನಮ್ಮ ಪಕ್ಷದ ಸಂಪ್ರದಾಯದಲ್ಲಿಲ್ಲ ಎಂದು ಅವರು ಹೇಳಿದರು. ಅವರ ನಡೆ ಜನರ ಸಹಾನುಭೂತಿ ಪಡೆಯಬಹುದು ಎಂದು ಶಿವಸೇನಾ ಭಾವಿಸಿದರೆ, ಅವರಿಗೆ ಜನರ ಮನಸ್ಸು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲಾ ಎಚಿದರ್ಥ ಎಂದು ಪ್ರತಿಕ್ರಿಯಿಸಿದ್ದಾರೆ.
ಅಕ್ಟೋಬರ್ 21 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಬಹುಮತ ಸಾಧಿಸಿದ್ದರೂ, ಎರಡೂ ಮಿತ್ರ ಪಕ್ಷಗಳು ಅಧಿಕಾರಕ್ಕಾಗಿ ಜಗಳವಾಡಿದ ನಂತರ ರಾಜ್ಯವು ರಾಜಕೀಯ ಅನಿಶ್ಚಿತತೆಗೆ ಮುಳುಗಿತು. ಚುನಾವಣೆಯಲ್ಲಿ ಗೆದ್ದ ನಂತರ ರಾಜ್ಯದಲ್ಲಿ 50:50 ಅಧಿಕಾರ ಹಂಚಿಕೆ ಒಪ್ಪಂದದ ಭರವಸೆ ಇದೆ ಎಂದು ಶಿವಸೇನೆ ಹೇಳಿಕೊಂಡರೆ, ಬಿಜೆಪಿ ಅಂತಹ ಯಾವುದೇ ಭರವಸೆ ನೀಡಿರುವುದನ್ನು ನಿರಾಕರಿಸಿತು.
ಶಿವಸೇನೆಯು ವಿರೋಧ ಪಕ್ಷವಾದ ಕಾಂಗ್ರೆಸ್-ಎನ್ಸಿಪಿ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿ ದ್ದಂತೆಯೇ ರಾಜ್ಯದಲ್ಲಿ ರಾಷ್ಟ್ರಪತಿ ನಿಯಮವನ್ನು ಘೋಷಿಸಲಾಗಿದ್ದು ಅದು ಮೈತ್ರಿಗೆ ಅಲ್ಪ ಹಿನ್ನೆಡೆಯಾಗಿರುವುದಂತು ನಿಜ, ಆದರೆ ಕೇಂದ್ರದ ಈ ಕ್ರಮ ಖಂಡಿಸಿ ಶಿವಸೇನೆ ಸುಪ್ರೀಂ ಮೊರೆ ಹೋಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
