ನವದೆಹಲಿ
ತಾವು ಕೆನಡಾ ದೇಶದ ನಾಗರಿಕತ್ವ ಹೊಂದಿರುವ ಕುರಿತು ಬಂದಿರುವ ಟೀಕೆಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಭಾರತದ ಕುರಿತಾಗಿ ತಮ್ಮ ದೇಶಪ್ರೇಮವನ್ನು ಸಾಬೀತುಗೊಳಿಸಬೇಕಾಗಿಲ್ಲ ಎಂದಿದ್ದಾರೆ
ಕೆನಡಾದ ನಾಗಕರಿತ್ವ ವಿಷಯವನ್ನು ಎಳೆದು ವಿವಾದವಾಗಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿರುವ ಅವರು, ಕೆನಡಾದ ನಾಗರೀಕತ್ವ ಹೊಂದಿರುವುದು ನಿಜ. ಆದರೆ ಕಳೆದ 7 ವರ್ಷಗಳಿಂದ ಆ ದೇಶಕ್ಕೆ ಭೇಟಿ ನೀಡಿಲ್ಲ ಎಂದಿದ್ದಾರೆ.
ಏ.29ರಂದು ಇಡೀ ಮುಂಬೈ ಮತದಾನ ಮಾಡಿದ್ದರೂ, ತಮ್ಮನ್ನು ದೇಶಭಕ್ತ ಎಂದು ಕರೆದುಕೊಂಡಿರುವ ಅಕ್ಷಯ್ ಮತ ಚಲಾಯಿಸಿರಲಿಲ್ಲ. ಇದನ್ನು ಅನೇಕರು ಟೀಕಿಸಿದ್ದರು.
ನಾನು ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಎಲ್ಲ ತೆರಿಗೆಗಳನ್ನು ಇಲ್ಲಿಯೇ ಪಾವತಿಸುತ್ತಿದ್ದೇನೆ. ನನ್ನ ನಾಗರಿಕತ್ವದ ಕುರಿತು ಆಸಕ್ತಿ ಮತ್ತು ಋಣಾತ್ಮಕ ಪ್ರಚಾರದ ಹಿಂದಿನ ಉದ್ದೇಶ ಅರ್ಥವಾಗಿಲ್ಲ. ಕೆನಾಡದ ಪಾಸ್ಪೋರ್ಟ್ ಹೊಂದಿರುವುದನ್ನು ನಾನು ಯಾವತ್ತೂ ತಿರಸ್ಕರಿಸಿಲ್ಲ ಅಥವಾ ಮುಚ್ಚಿಟ್ಟಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಭಾರತದ ಕುರಿತಾಗಿನ ನನ್ನ ಪ್ರೀತಿಯನ್ನು ಯಾರಿಗೂ ಸಾಬೀತುಗೊಳಿಸಬೇಕಿಲ್ಲ. ನಾಗರಿಕತ್ವ ವಿಷಯವನ್ನು ಎಳೆದು ವಿವಾದವಾಗಿಸಿರುವುದು ಬೇಸರ ಮೂಡಿಸಿದೆ. ಇದೊಂದು ವೈಯಕ್ತಿಕ ವಿಷಯ ಎಂದಿದ್ದಾರೆ.ಭಾರತವನ್ನು ಬಲಿಷ್ಠವಾಗಿಸಲು ತಮ್ಮ ಕೈಲಾದ ಪುಟ್ಟ ಕೊಡುಗೆ ನೀಡುವುದನ್ನು ಮುಂದುವರಿಸುತ್ತೇನೆ ಎಂದು ರುಸ್ತುಂ ಸ್ಟಾರ್ ಬರೆದುಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/Akshay_Kumar__1549512383-1.gif)