ನವದೆಹಲಿ:
ಮಹಾರಾಷ್ಟದಲ್ಲಿ ವಿಧಾನಸಭಾ ಚುನಾವಣೆ ಮುಗಿದು ಈಗ ಗದ್ದುಗೆ ಗುದ್ದಾಟ ಶುರುವಾಗಿದೆ ಒಟ್ಟಾಗಿ ಚುನಾವಣೆ ಎದುರಿಸಿದ್ದ ಬಿಜೆಪಿ ಹಾಗು ಶಿವಸೇನೆ ಇದೀಗ ಉಭಯ ಪಕ್ಷಗಳ ನಡುವೆ ಅಧಿಕಾರ ಹಂಚಿಕೆ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ . ಬಿಜೆಪಿಯ ಬಹುಕಾಲದ ಆಪ್ತಮಿತ್ರ ಮತ್ತು ಮಹಾರಾಷ್ಟ್ರದ ಚುನಾವಣೆಯಲ್ಲಿ ಪ್ರಮುಖ ಪಾಲುದಾರ ಪಕ್ಷವಾಗಿರುವ ಶಿವಸೇನೆ ಈಗ ರಾಜಕೀಯದಲ್ಲಿ ತನ್ನ ಹೊಸ ದಾಳ ಉರುಳಿಸಿದೆ ಈ ಬಾರಿ ಸಿಕ್ಕಿರುವ ಅಧಿಕಾರದಲ್ಲಿ 50:50 ಸೂತ್ರಕ್ಕೆ ತಾನು ಅಂಟುಕೊಳ್ಳುವ ಮೂಲಕ ಬಿಜೆಪಿ ಮೇಲೆ ಬೇರೆ ರೀತಿಯಲ್ಲಿಯೇ ಒತ್ತಡ ಹೇರುತ್ತಿದೆ.
ಅದಲ್ಲದೆ ಆದಿತ್ಯ ಠಾಕ್ರೆ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿಸಿ ಶುಕ್ರವಾರ ಪೋಸ್ಟರ್ ಹಾಕಲಾಗಿದೆ.ಇನ್ನು ಉದ್ಧವ್ ಠಾಕ್ರೆ ತನ್ನ ದೀರ್ಘಕಾಲದ ಪಾಲುದಾರ ಪಕ್ಷವಾದ ಬಿಜೆಪಿಯೊಂದಿಗೆ ಎಲ್ಲವೂ ಸರಿಯಿಲ್ಲ ಎಂಬ ಸುಳಿವು ನೀಡಿದ್ದಾರೆ.
“ಲೋಕಸಭಾ ಚುನಾವಣೆಯ ಸಮಯದಲ್ಲಿ ನಾವು ಸ್ಥಳಾವಕಾಶ ಕಲ್ಪಿಸಿದ್ದೇವೆ. ಆದರೆ ಅದನ್ನೇ ಮುಂದುವರಿಸಲು ಸಾಧ್ಯವಿಲ್ಲ ನಮ್ಮ ಪಕ್ಷದ ಅಭಿವೃದ್ಧಿಯ ಬಗ್ಗೆ ಖಚಿತಿಪಡಿಸಿಕೊಳ್ಳಬೇಕಿದೆ ಎಂದು ಉದ್ಧವ್ ಠಾಕ್ರೆ ಕಡ್ಡಿಮುರಿದಂತೆ ಹೆಳಿದ್ದಾರೆ. ತಮ್ಮ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಅಧಿಕಾರ ಹೊಂದಿರುವ ಪಕ್ಷ ದುರಹಂಕಾರ ಪ್ರದರ್ಶಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೆಕು ಎಂದು ಎಚ್ಚರಿಕೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/10/UddhavThackeray.gif)