ನಾವು ಪ್ರತಿಪಕ್ಷದಲ್ಲಿ ಕೂರುತ್ತೇವೆ : ಶರದ್ ಪವಾರ್

ಮುಂಬೈ:

     ನೆರೆಯ ಮಹಾರಾಷ್ಟ್ರದಲ್ಲಿ ಚುನಾವಣೆ ಮುಗಿದು ಸುಮಾರು ಎರಡು ವಾರವಾದರು ಸರ್ಕಾರ ರಚನೆ ಕಸರತ್ತು ಮುಂದುವರೆಯುತ್ತಿದ್ದು, ಇಷ್ಟು ದಿನ ಮೈತ್ರಿ ಮಂತ್ರ ಜಪಿಸುತ್ತಿದ್ದ ಶಿವಸೇನೆ ಸ್ವತಂತ್ರ್ಯವಾಗಿ ಸರ್ಕಾರಬ ರಚನೆಗೆ ತನ್ನ ಬದ್ದ ವೈರಿಯೆಂದೆ ಕರೆಸಿಕೊಳ್ಳವ ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತೇವೆ ಎಂದು ಇನ್ನು ಕನಸು ಕಾಣುವ ಮುನ್ನವೆ ಅದು ಕಮರಿಹೋಗಿದೆ.

    ಅದು ಏಕೆಂದರೆ ಎನ್ ಸಿ ಪಿ ಪಕ್ಷದ ಮಮುಖ್ಯಸ್ಥ ಶರದ್ ಪವಾರ್ ಅವರು ನಮ್ಮ ಪಕ್ಷ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಇಚ್ಚಿಸುತ್ತೇನೆಯೆ ಹೊರತು ಅಧಿಕಾರಕ್ಕಾಗಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಂಡಾ ತುಂಡವಾಗಿ ತಿಳಿಸಿದ್ದಾರೆ..ಬಿಜೆಪಿ-ಶಿವಸೇನೆ ಪರವಾಗಿ ರಾಜ್ಯದ ಜನತೆ ತೀರ್ಪು ಕೊಟ್ಟಿದ್ದು ಅವರು ಸರ್ಕಾರ ರಚನೆ ಮಾಡಬೇಕು. ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಗೆ ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಜನತೆ ತೀರ್ಪು ಕೊಟ್ಟಿದ್ದಾರೆ ಎಂದು ಮುಂಬೈಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

    ಬಿಜೆಪಿ-ಶಿವಸೇನೆ ಮೈತ್ರಿ ಪರವಾಗಿ ಜನರ ತೀರ್ಪು ಸಿಕ್ಕಿದೆ, ಶಿವಸೇನೆ-ಎನ್ ಸಿಪಿ ಸರ್ಕಾರ ರಚನೆಯ ಪ್ರಶ್ನೆ ಹೇಗೆ ಇಲ್ಲಿ ಉದ್ಭವಿಸುತ್ತದೆ. ಕಳೆದ 25 ವರ್ಷಗಳಿಂದ ಅವರು ಜೊತೆಯಾಗಿ ಇದ್ದಾರೆ. ಇಂದು ಅಥವಾ ನಾಳೆ ಅವರು ಒಂದಾಗುತ್ತಾರೆ. ಹೀಗಾಗಿ ಅವರೇ ಸಾಧ್ಯವಾದಷ್ಟು ಬೇಗನೆ ಸರ್ಕಾರ ರಚನೆ ಮಾಡಬೇಕು. ಜವಾಬ್ದಾರಿಯುತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ನಮ್ಮ ಕೆಲಸ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap