ಪ.ಬಂಗಾಳ ಹಂತಹಂತವಾಗಿ ರೌಡಿ ರಾಜ್ಯವಾಗುತ್ತಿದೆ : ದಿಲೀಪ್ ಘೋಷ್

ಕರಗಪುರ:

   ದೇಶದಲ್ಲಿ ರೌಡಿ ರಾಜ್ಯಗಳೆಂದೇ ಕುಖ್ಯಾತಿ ಪಡೆದಿರುವ ಉತ್ತರ ಪ್ರದೇಶ, ಬಿಹಾರಗಳ ಸಾಲಿಗೆ ಈಗ ಪಶ್ಚಿಮ ಬಂಗಾಳ ಕೂಡ ಹಂತ ಹಂತವಾಗಿ ಸೇರ್ಪಡೆಯಾಗುತ್ತಿದೆ ಎಂದು  ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

    ಬಿಜೆಪಿ ಅಧಿಕಾರದಲ್ಲಿರುವ ಆ ಎರಡು ರಾಜ್ಯಗಳಲ್ಲಿ ಮಾಫಿಯಾ-ರಾಜ್ ಅಸ್ತಿತ್ವದಲ್ಲಿದೆ ಎಂದು ಒಪ್ಪಿಕೊಳ್ಳುತ್ತಿರುವುದು ಒಳ್ಳೆಯದೇ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ.ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆ ಎದುರೇ  ಬಿಜೆಪಿ ಕೌನ್ಸಿಲರ್ ಹತ್ಯೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು  ದಿಲೀಪ್ ಘೋಷ್ ಪ್ರತಿಕ್ರಿಯಿಸಿದ್ದಾರೆ. ದಿನದಿಂದ ದಿನಕ್ಕೆ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.ತಿತಾಗರ್ ಮುನಿಸಿಪಾಲಿಟಿ ಕೌನ್ಸಿಲರ್ ಶುಕ್ಲಾ ಅವರನ್ನು ಭಾನುವಾರ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap