ಭುವನೇಶ್ವರ
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿರುವ ಕಾರಣಕ್ಕೆ ವಾರಾಂತ್ಯ ರಾಜ್ಯವನ್ನು ಸಂಪೂರ್ಣ ಬಂದ್ ಮಾಡಲು ಒಡಿಶಾ ಸರ್ಕಾರ ನಿರ್ಧರಿಸಿದೆ.
ಜೂನ್ ತಿಂಗಳು ಪೂರ್ತಿ ಪ್ರತಿ ಶನಿವಾರ, ಭಾನುವಾರ ರಾಜ್ಯವನ್ನು ಬಂದ್ ಮಾಡಲಾಗುತ್ತಿದ್ದು, ಯಾವುದೇ ಚಟುವಟಿಕೆ ಗಳು ನಡೆಯುವುದಿಲ್ಲ, ಅಂಗಡಿ ಮುಂಗಟ್ಟುಗಳು ತೆರೆಯುವುದಿಲ್ಲ. ಕೇವಲ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಹೊರಗೆ ಬರಬಹುದಾಗಿದೆ ಎಂದು ಸೂಚನೆ ನೀಡಿದ್ದಾರೆ.ಗಂಜಾಮ್, ಪುರಿ, ನಾಯಾಗಾರ, ಖೋರ್ದಾ, ಕಟಕ್, ಜಗತ್ಸಿಂಗ್ ಪುರ, ಕೇಂದ್ರಪದ, ಜಾಜ್ಪುರ, ಭದ್ರಕ್, ಬಾಲಾಸೂರ್, ಬಾಲಂಗಿರ್ ಈ ಪ್ರದೇಶದಲ್ಲಿ ತುರ್ತು ಅಗತ್ಯಗಳಿಗೆ ಮಾತ್ರ ಹೊರಗಡೆ ಹೋಗಲು ಅವಕಾಶ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/india-fights-covid-19-odisha-govt-to-impose-lockdown-in-bhubaneswar-bhadrak-starting-from-8-pm-tonight.gif)