ಬಿಜೆಪಿ ಬಿಡುವರೇ ಯಶವಂತ್…!!?

ನವದೆಹಲಿ:

     ಮುಂಬರುವ ಲೋಕಸಭೆ ಚುನಾವಣೆಯ ತಯಾರಿ ಆರಂಭಿಸಿರುವ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿದೆ .ತನ್ನ ಪಕ್ಷದ ಪ್ರಭಾವಿ ನಾಯಕರ ನಿರ್ಗಮನದ ಮೂಲಕ ಪಕ್ಷದ ಜಂಗಾಬಲವೇ ಮುರಿದು ಬಿದ್ದಿರುವ ಆಪ್ ಗೆ ಬಲ ನೀಡಲು ಕೇಜ್ರಿವಾಲ್ ಅಂಡ್ ಟೀಮ್ ಬೇರೆ ರಾಜಕೀಯ ಪಕ್ಷದ ಅತೃಪ್ತತ ಶಸಕರಿಗೆ ಗಾಳಹಾಕಿದೆ ಎನ್ನಲಾಗಿದೆ ಅದರ ಒಂದು ಪ್ರಯತ್ನವಾಗಿ ಬಿಜೆಪಿಯ ರೆಬೆಲ್ ನಾಯಕ ಯಶವಂತ್ ಸಿನ್ಹಾ ಅವರಿಗೆ ಆಮ್ ಆದ್ಮಿ ಪಕ್ಷವು ಟಿಕೆಟ್ ಆಫರ್ ಮಾಡಿದೆ. ದೆಹಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಯಶವಂತ್ ಸಿನ್ಹಾರನ್ನು ಕೋರಲಾಗಿದೆ.

     ಈ ಬಗ್ಗೆ ಮಾತುಕತೆ ಸದ್ಯ ಜಾರಿಯಲ್ಲಿದೆ ಎಂದು ಎಎಪಿಯ ಹಿರಿಯ ನಾಯಕರೊಬ್ಬರು ಸುಳಿವು ನೀಡಿದ್ದಾರೆ .ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರಿಗೂ ದೆಹಲಿಯ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲಾಗಿದೆ . ಆದರೆ, ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಬಿಹಾರದ ಪಾಟ್ನಾ ಸಾಹೀಬ್ ಕ್ಷೇತ್ರವನ್ನು ತೊರೆಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಗುಮಾನಿ ಎದ್ದಿದೆ.ಆದರೆ ಶತ್ರುಘ್ನ ಸಿನ್ಹಾ ಅವರು ಪಕ್ಷ ತೊರೆಯಲು ಸಹ ಹಿಂದೇಟು ಹಾಕುತ್ತಿದ್ದಾರೆ ಎಂಬ ಇನ್ನೊಂದು ಸುದ್ಧಿಯೂ ಹರಿದಾಡುತ್ತಿದೆ.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap