ರಫೆಲ್‌ ಹಗರಣ: ಶುಕ್ರವಾರ ಕಾಂಗ್ರೆಸ್ ಅರ್ಜಿ ವಿಚಾರಣೆ

ನವದೆಹಲಿ

      ಸುಪ್ರೀಂಕೋರ್ಟ್, ಬಹುಕೋಟಿ ರಫೆಲ್‌ ಯುದ್ಧವಿಮಾನ ಖರೀದಿ ಹಗರಣದಲ್ಲಿನ ಕ್ಲಿಯರೆನ್ಸ್‌ ನೀಡಿರುವ ತನ್ನ ತೀರ್ಪಿನ ಮರುಪರಿಶೀಲನಾ ಅರ್ಜಿ ವಿಚಾರಣೆಯನ್ನು ಮೇ.10ಕ್ಕೆ ನಿಗಧಿಪಡಿಸಿದೆ.

      ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಚೌಕಿದಾರ್‌ ಚೋರ್‌ ಹೈ’ ಎಂಬ ಹೇಳಿಕೆ ನೀಡಿರುವ ಕುರಿತು ದಾಖಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ರಫೆಲ್ ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ.

       ಉನ್ನತ ನ್ಯಾಯಾಲಯದ ತೀರ್ಪಿನ ಕುರಿತು ತನ್ನ ಹೇಳಿಕೆಗೆ ರಾಹುಲ್‌ ವಿಷಾದ ವ್ಯಕ್ತಪಡಿಸಿದ್ದರು. ಪ್ರಧಾನಿ ಕಚೇರಿಯಿಂದ ರಫೆಲ್‌ ದಾಖಲೆಗಳನ್ನು ಕದ್ದಿರುವ ಅಪೂರ್ಣ ಮಾಹಿತಿ ಆಧರಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link