ಶ್ರೀನಗರ:
ರಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ಬಂದು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ.ಕಳೆದ ರಾತ್ರಿಯಿಂದ ಜಮ್ಮು-ಕಾಶ್ಮೀರದ ರಜೌರಿ, ಪೂಂಚ್ ಮತ್ತು ಕತುವಾ ಜಿಲ್ಲೆಗಳ ಮಂಜಕೋಟೆ, ಕೆರಿ, ಬಾಲಾಕೋಟ್ ಮತ್ತು ಕರೊಲ್ ಮೈಟ್ರಾನ್ ಎಂಬ ವಲಯಗಳಲ್ಲಿ ಕದನ ವಿರಾಮ ಉಲ್ಲಂಘಿಸಿ ಬಂದ ಪಾಕಿಸ್ತಾನ ಸೇನೆ ಶಸ್ತ್ರಾಸ್ತ್ರ ಮತ್ತು ಶೆಲ್ ಗಳಿಂದ ಏಕಾಏಕಿ ದಾಳಿ ಮಾಡಲಾರಂಭಿಸಿತು.ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತೀಯ ಸೇನೆ ನೀಡಿದೆ. ಆದರೆ ಈ ದಾಳಿ ವೇಳೆ ಭಾರತದ ಯೋಧ ಹುತಾತ್ಮರಾಗಿದ್ದಾರೆ.
ಇದಕ್ಕೂ ಮುನ್ನ ಪಾಕಿಸ್ತಾನ ನೌಶೆರಾ ಎಂಬಲ್ಲಿ ನಾಗರಿಕರ ಮನೆಗಳ ಮೇಲೆ ಗುರಿಯಾಗಿಟ್ಟುಕೊಂಡು ದಾಳಿ ಮಾಡಿತ್ತು. ಹಲವರ ಮನೆಗಳಿಗೆ ಹಾನಿಯಾಗಿವೆ. ರಜೌರಿ ಜಿಲ್ಲೆಯ ಮಂಜಕೋಟೆ ವಲಯದಲ್ಲಿ ನಡೆದ ಶೆಲ್ ದಾಳಿಯಲ್ಲಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು.ಅಲ್ಲಿ ವೈದ್ಯರು ಎಕ್ಸ್ ರೇ ಮಾಡಿ ಶೆಲ್ ನ್ನು ಹೊರತೆಗೆದಿದ್ದಾರೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
