ಮಕ್ಕಳ ದುರುಪಯೋಗ : ಆಪ್‌ ನಾಯಕಿ ವಿರುದ್ದ FIR ದಾಖಲಿಸಲು ಎನ್‌ಸಿಪಿಸಿಆರ್ ಆಗ್ರಹ

ನವದೆಹಲಿ

     ದೆಹಲಿಯಲ್ಲಿ ಅಧಕಾರದಲ್ಲಿರುವ ಆಪ್‌ ಗೆ ಯಾಕೋ ಗ್ರಹಚಾರವೇ ಸರಿಯಿಲ್ಲದಂತೆ ಕಾಣುತ್ತಿದೆ ಅಂದು ಸಿಸೋಡಿಯಾ ಅಬಕಾರಿ ನಿತಿ ಹಗರಣವಾದರೆ ಇಂದು ಅತಿಶಿ ಅವರ ವಿರುದ್ದ “ವೈಯಕ್ತಿಕ ಅಜೆಂಡಾಗಳಿಗಾಗಿ” ಮಕ್ಕಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ  ಎಫ್‌ಐಆರ್ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಆಗ್ರಹಿಸಿದೆ.

 

    ಅತಿಶಿ ಸಿಂಗ್ ಅವರ ನಿರ್ದೇಶನದ ಮೇರೆಗೆ ದೆಹಲಿ ಶಿಕ್ಷಣ ಕಾರ್ಯಪಡೆಯು ತಮ್ಮ ವೈಯಕ್ತಿಕ ಅಜೆಂಡಾಗಳು ಮತ್ತು ರಾಜಕೀಯ ಪ್ರಚಾರಗಳಿಗಾಗಿ ಶಾಲೆಗಳಲ್ಲಿ ಕಲಿಯುತ್ತಿರುವ ಅಪ್ರಾಪ್ತ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ” ಎಂದು ಎನ್‌ಸಿಪಿಸಿಆರ್ ಹೇಳಿದೆ. ಈ ಬಗ್ಗೆ ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಯುಕ್ತರಿಗೆ ಮನವಿ ಮಾಡಿದೆ.

     ಮನೋಜ್ ತಿವಾರಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಅತಿಶಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ದೆಹಲಿ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ತಮ್ಮ ವೈಯಕ್ತಿಕ ಅಜೆಂಡಾಗಳಿಗಾಗಿ ಮಕ್ಕಳನ್ನು ದುರುಪ ಯೋಗಪಡಿಸಿಕೊಂಡ ಆರೋಪದ ಮೇಲೆ ಆಕೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link