ನವದೆಹಲಿ
ದೆಹಲಿಯಲ್ಲಿ ಅಧಕಾರದಲ್ಲಿರುವ ಆಪ್ ಗೆ ಯಾಕೋ ಗ್ರಹಚಾರವೇ ಸರಿಯಿಲ್ಲದಂತೆ ಕಾಣುತ್ತಿದೆ ಅಂದು ಸಿಸೋಡಿಯಾ ಅಬಕಾರಿ ನಿತಿ ಹಗರಣವಾದರೆ ಇಂದು ಅತಿಶಿ ಅವರ ವಿರುದ್ದ “ವೈಯಕ್ತಿಕ ಅಜೆಂಡಾಗಳಿಗಾಗಿ” ಮಕ್ಕಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಫ್ಐಆರ್ ದಾಖಲಿಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್ಸಿಪಿಸಿಆರ್) ಆಗ್ರಹಿಸಿದೆ.
ಅತಿಶಿ ಸಿಂಗ್ ಅವರ ನಿರ್ದೇಶನದ ಮೇರೆಗೆ ದೆಹಲಿ ಶಿಕ್ಷಣ ಕಾರ್ಯಪಡೆಯು ತಮ್ಮ ವೈಯಕ್ತಿಕ ಅಜೆಂಡಾಗಳು ಮತ್ತು ರಾಜಕೀಯ ಪ್ರಚಾರಗಳಿಗಾಗಿ ಶಾಲೆಗಳಲ್ಲಿ ಕಲಿಯುತ್ತಿರುವ ಅಪ್ರಾಪ್ತ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ತಿಳಿಸಲಾಗಿದೆ” ಎಂದು ಎನ್ಸಿಪಿಸಿಆರ್ ಹೇಳಿದೆ. ಈ ಬಗ್ಗೆ ತಕ್ಷಣ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಯುಕ್ತರಿಗೆ ಮನವಿ ಮಾಡಿದೆ.
