ಬೆಂಗಳೂರು:
ಕರ್ನಾಟಕದ ಕರಾವಳಿಯ ಕುಂದಾಪುರ ತಾಲೂಕಿನ ಪ್ರಸಿದ್ಧ ಮಲ್ಯಾಡಿ ಪಕ್ಷಿಧಾಮದಲ್ಲಿ ಭಾರತೀಯ ನೀರುನಾಯಿಯೊಂದು ಕಾಣಿಸಿಕೊಂಡಿದ್ದು ಪರಿಸರ ಪ್ರೇಮಿಗಳು ಹಾಗೂ ಪ್ರಾಣಿಪ್ರಿಯರಲ್ಲಿ ಸಂತಸ ಮೂಡಿಸಿದೆ.
ಸ್ಥಳೀಯವಾಗಿ ‘ನೀರು ನಾಯಿ’ ಎಂದು ಕರೆಯುವ ಇಂಡಿಯನ್ ಒಟ್ಟರ್ ಪ್ರಾಣಿಗಳು ಇತ್ತೀಚಿನ ತಿಂಗಳುಗಳಲ್ಲಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡಿವೆ. ಈ ಹಿಂದೆ ಈ ಅಭಯಾರಣ್ಯವು ಈಗ್ರೆಟ್ಸ್ (ಬೆಳ್ಳಕ್ಕಿ), ಕ್ರೆಸ್ಟೆಡ್ ಲಾರ್ಕ್ಸ್, ಲಿಟಲ್ ಕಾರ್ಮೊರೆಂಟ್ಸ್ (ನೀರುಕಾಗೆ), ಸ್ಪಾಟ್-ಬಿಲ್ಡ್ ಡಕ್ (ವರಟೆ ಅಥವಾ ಬಾತುಕೋಳಿ), ಕಾಮನ್ ಕೂಟ್, ಬಾಚಣಿಗೆ ಬಾತುಕೋಳಿ ಮತ್ತು ಯುರೇಷಿಯನ್ ಟೀಲ್ ಮುಂತಾದ ವಿವಿಧ ಜಾತಿಯ ಪಕ್ಷಿಗಳ ಆಗಮನಕ್ಕೆ ಸಾಕ್ಷಿಯಾಗಿತ್ತು.
![](https://prajapragathi.com/wp-content/uploads/2023/04/Untitled-10-1.jpg)