ಬೆಳಕಿಗೆ ಬಂದಿದೆ ಹೊಸ ಪ್ರಿಪೇಯ್ಡ್ ಟಾಸ್ಕ್ ಹಗರಣ….!

ಮೈಸೂರು: 

        ಪಾರ್ಟ್ ಟೈಂ ಉದ್ಯೋಗಾಕಾಂಕ್ಷಿಗಳು ಮತ್ತು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಬಯಸುವವರು ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ ಮತ್ತು ಸೈಬರ್ ಅಪರಾಧಿಗಳು ಕಳೆದ ಕೆಲವು ತಿಂಗಳುಗಳಲ್ಲಿ ಮೈಸೂರಿನಲ್ಲಿಯೇ ಕನಿಷ್ಠ 30 ಸಂತ್ರಸ್ತರ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಸಂಪೂರ್ಣ ಖಾಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

   ಕಳೆದ ಎರಡು ತಿಂಗಳಿನಿಂದ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರುಗಳ ಪ್ರಕಾರ, ಎಲ್ಲಾ ಸೈಬರ್ ವಂಚನೆಗಳಲ್ಲಿ ಸುಮಾರು ಶೇ 60 ರಷ್ಟು ಪ್ರಕರಣಗಳು ಈ ಪ್ರಿಪೇಯ್ಡ್ ಟಾಸ್ಕ್ ಹಗರಣಕ್ಕೆ ಸಂಬಂಧಿಸಿದೆ. 20 ಸಾವಿರದಿಂದ 35 ಲಕ್ಷದವರೆಗೆ ಜನರು ಹಣ ಕಳೆದುಕೊಂಡಿದ್ದಾರೆ.

     ಈ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರಿಗೆ, ಸಂತ್ರಸ್ತರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದ ಖಾತೆಗಳು ದೇಶದಾದ್ಯಂತ ಹರಡಿರುವ ವಿವಿಧ ಬ್ಯಾಂಕ್ ಶಾಖೆಗಳಲ್ಲಿವೆ ಎಂಬುದು ತಿಳಿದುಬಂದಿದೆ. ಇಂತಹ ಪ್ರಿಪೇಯ್ಡ್ ಟಾಸ್ಕ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಕ್ರೈಂ ಪೊಲೀಸರು ಜನರಿಗೆ ಸಲಹೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap