ಕಾಂಗ್ರೆಸ್‍ ನದ್ದು ತೋರಿಕೆಯ ಪ್ರಣಾಳಿಕೆ; ಮಾಯಾವತಿ ಟೀಕೆ

ಲಖನೌ

       ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ನಾಯಕಿ ಮಾಯಾವತಿ ಅವರು, ಕಾಂಗ್ರೆಸ್‍ ಪ್ರಣಾಳಿಕೆಯನ್ನು ತೋರಿಕೆ ಹಾಗೂ ಭ್ರಮೆಯನ್ನು ಹುಟ್ಟುಹಾಕುವ ತಂತ್ರ ಎಂದು ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಭರವಸೆಗಳನ್ನು ಈಡೇರಿಸುವ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‍ ಎರಡೂ ಒಂದೇ.

        ಕಾಂಗ್ರೆಸ್‍ ಪ್ರಣಾಳಿಕೆ ಕೇವಲ ಒಂದು ತೋರಿಕೆಯಾಗಿದ್ದು, ತನ್ನ ಹಿಂದಿನ ಭರವಸೆಗಳಂತೆಯೇ ಇದು ಕೂಡ ಭ್ರಮೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‍ ಯಾವತ್ತೂ ತನ್ನ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಜನರು ಅವರನ್ನು ನಂಬುವುದಿಲ್ಲ ಎಂದಿದ್ದಾರೆ. ಬಿಜೆಪಿ ವಿರುದ್ಧವೂ ಹರಿಹಾಯ್ದಿರುವ ಮಾಯಾವತಿ, ರಾಜ್ಯದಲ್ಲಿ ಬಿಎಸ್ ಪಿ, ಎಸ್‍ ಪಿ ಹಾಗೂ ಅರ್ ಎಲ್‍ ಡಿ ಮೈತ್ರಿಗೆ ಹೆದರಿಕೊಂಡಿರುವ ಬಿಜೆಪಿ, ಜಾತೀಯತೆಯ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಗೆ ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link