ಬೆಂಗಳೂರು:
ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ತೆಲುಗಿನ ‘RRR’ ಚಿತ್ರದ ನಾಟು ನಾಟು ಹಾಡು ಮತ್ತು ತಮಿಳಿನ ಸಾಕ್ಷ್ಯಚಿತ್ರ ‘ ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡವನ್ನು ರಾಜ್ಯಸಭೆಯಲ್ಲಿ ಪಕ್ಷ ಬೇಧ ಮರೆತು ಮಂಗಳವಾರ ಅಭಿನಂದಿಸಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ, ಸಭಾಪತಿ ಜಗದೀಪ್ ಧನ್ ಕರ್, ಉತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಮತ್ತು’ ದಿ ಎಲಿಫೆಂಟ್ ವಿಸ್ಪರರ್ಸ್ ‘ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಪಡೆದಿರುವುದು ,ಭಾರತದ ಚಿತ್ರಗಳಿಗೆ ಹೊಸ ಮನ್ನಣೆಯನ್ನು ಸೂಚಿಸುತ್ತವೆ ಎಂದರು.
ಸದನದ ನಾಯಕ ಪಿಯೂಷ್ ಗೋಯೆಲ್ ಮಾತನಾಡಿ, ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವನ್ನು ಇಬ್ಬರು ಶ್ರೇಷ್ಠ ಮಹಿಳೆಯರು ತಯಾರಿಸಿದ್ದಾರೆ. ಇದು ಲಿಂಗಕ್ಕೆ ಸಂಬಂಧಿಸಿದೆ. ಇದು ನಮ್ಮ ಭಾರತದ ಮಹಿಳೆಯರಿಗೆ ಗೌರವವಾಗಿದೆ. ಇದು ಭಾರತದ ಮಹಿಳೆಯರಿಗೆ ದೊರೆತ ಮನ್ನಣೆಯ ದೊಡ್ಡ ಗುರುತು ಎಂದು ಶ್ಲಾಘಿಸಿದರು.
