ಹೊಸಪೇಟೆ:
25 ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಜಿಲ್ಲೆಯ ಕಂಪ್ಲಿ ತಾಲ್ಲೂಕ್ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ತಾಲೂಕ್ ಕಚೇರಿಯ ಆವರಣದಲ್ಲಿ ಜೇನು ಹುಳು ಗೂಡು ಕಟ್ಟಿಕೊಂಡಿತ್ತು. ಸಾರ್ವಜನಿಕರು ಸೇವೆ ಬಯಸಿ ನೂರಾರು ಜನ ತಾಲೂಕು ಆಫೀಸಿನಲ್ಲಿ ಜಮಾವಣೆಗೊಂಡಿದ್ದರು. ಸರ್ಕಾರ ಲಭ್ಯಗಳನ್ನು ಪಡೆಯಲು ಬಂದಿದ್ದ ಜನರ ಮೇಲೆ ಏಕಾಏಕಿಯಾಗಿ ಜೇನು ಹುಳುಗಳು ದಾಳಿ ನಡೆಸಿವೆ.
ಇದರಿಂದಾಗಿ ಜನ ಕಕ್ಕಾಬಿಕ್ಕಿಯಾಗಿ ಓಡಿದರು. ಈ ಸಮಯದಲ್ಲಿ ಜೇನು ಹುಳು ದಾಳಿಗೆ ಮೂವತ್ತಕ್ಕೂ ಹೆಚ್ಚು ಜನಕ್ಕೆ ಗಾಯವಾಗಿದೆ. ಆರು ಜನರಿಗೆ ತೀವ್ರ ಗಾಯವಾಗಿದೆ.
ದಾಳಿ ಬಳಿಕ ಕಛೇರಿ ಆವರಣ ಸಂಪೂರ್ಣ ಖಾಲಿಖಾಲಿಯಾಗಿದೆ. ಜೇನುಗೂಡಿನಿಂದ ಅಪಾಯದ ಅರಿವಿದ್ದರೂ ಜೇನುಗೂಡು ಅಧಿಕಾರಿಗಳು ತೆರವುಗೊಳಿಸಿರಲಿಲ್ಲ. ಏನಾದರು ಆಗಿದ್ದರೆ ಯಾರು ಗತಿ ಎಂದು ಅಧಿಕಾರಿಗಳ ಮೇಲೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ