ರಾಯಚೂರು : ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ರಾಯಚೂರು

   ಕರ್ನಾಟಕದ ರೈತರು ಬೆಳೆದ ಈರುಳ್ಳಿ ಈಗ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ ಇದಕ್ಕೆ ಕಾರಣ ಈರುಳ್ಳಿ ದರ ಕುಸಿತ. ಎಪಿಎಂಸಿ ಪ್ರಾಂಗಣದಲ್ಲಿ ರಾಶಿಹಾಕಿದ್ದ ಈರುಳ್ಳಿ ಖರೀದಿಗೆ ವ್ಯಾಪಾರಿಗಳು ಎರಡು ದಿನಗಳಾದರೂ ಬಂದಿರಲಿಲ್ಲ. ಇದರಿಂದ ಅಸಹಾಯಕರಾದ ರೈತರು ರಾಯಚೂರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ವರದಿಯಾಗಿದೆ.  ಎಪಿಎಂಸಿಯಿಂದ ರೈತರು ಎಪಿಎಂಸಿ ಪ್ರಾಂಗಣಕ್ಕೆ ಈರುಳ್ಳಿ ತೆಗೆದುಕೊಂಡು ಬರದಂತೆ ಅಧಿಕೃತವಾಗಿ ಸೂಚನೆ ನೀಡಲಾಗಿದೆ.

     ಪ್ರತಿದಿನ ವ್ಯಾಪಾರ ವಹಿವಾಟು ಸರಾಗವಾಗಿ ನಡೆಯುತ್ತಿಲ್ಲ. ಮಾರಾಟಕ್ಕೆ ತರುವ ಉತ್ಪನ್ನ ವ್ಯಾಪಾರವಾಗದೇ ಹಾಗೆ ಉಳಿಯುತ್ತಿದೆ. ಎಲ್ಲಾ ರೈತ ಬಾಂಧವರು ಈರುಳ್ಳಿಯನ್ನು ಬೇರೆ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಿಕೊಳ್ಳಬೇಕು” ಎಂದು ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap