ಬೆಂಗಳೂರು:
:ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ವತಿಯಿಂದ ಬೆಂಗಳೂರು ನಗರದ CMA ಗ್ರಾಂಡ್ ಕನ್ವೆನ್ಷನ್ ಹಾಲ್ ನಲ್ಲಿ ಇಫ್ತಾರ್ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನನ್ ಒಕ್ಕೂಟ ಸರ್ಕಾರ ತನ್ನ ಕೋಮು ದ್ವೇಷದ ಮುಂದುವರಿದ ಭಾಗವಾಗಿ ಈಗ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ದೇಶವು ಜಾತ್ಯಾತೀತ ದೇಶವಾಗಿದ್ದು, ಇಲ್ಲಿ ಎಲ್ಲಾ ಧರ್ಮದವರು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಸಂವಿಧಾನದಲ್ಲಿ ಧಾರ್ಮಿಕ ಹಕ್ಕುಗಳ ಅನುಸಾರ ಅವಕಾಶ ನೀಡಲಾಗಿದೆ. ಅದರಂತೆಯೇ ಇಲ್ಲಿನ ಮುಸ್ಲಿಮರು ಅವರ ಧಾರ್ಮಿಕ ಆಚಾರ ಮತ್ತು ವಿಚಾರಗಳನ್ನು ಅನುಸರಣೆ ಮಾಡುತ್ತಾರೆ. ಆದರೆ ಒಕ್ಕೂಟ ಸರ್ಕಾರ,ಮುಸ್ಲಿಂ ಸಮುದಾಯದ ವಿರೋಧದ ನಡೆವೆಯೂ ಹಠಕ್ಕೆ ಬಿದ್ದು ವಕ್ಫ್ ತಿದ್ದುಪಡಿ ಬಿಲ್ ತರುವ ಮೂಲಕ ಮುಸ್ಲಿಮರ ಸಂವಿಧಾನಿಕ ಮತ್ತು ಧಾರ್ಮಿಕ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ವಕ್ಫ್ ಆಸ್ತಿಗಳನ್ನು ಕಬಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ವಕ್ಫ್ ಆಸ್ತಿಗಳು ಮುಸ್ಲಿಂ ಸಮಾಜದ ಉಳ್ಳವರು,ಸಮಾಜದಲ್ಲಿ ಇರುವ ಬಡವರು ಮತ್ತು ನಿರ್ಗತರಿಗಾಗಿ ಸಹಾಯ ಮಾಡಲಿಕ್ಕಾಗಿ ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ ಆಸ್ತಿ ಇದು. ಈ ಆಸ್ತಿಗಳ ರಕ್ಷಣೆಗಾಗಿ ಸಂಘಟಿತ ಹೋರಾಟಕ್ಕೆ ಕರೆ ನೀಡಿದರು.
ಬಿಜೆಪಿ ನೇತೃತ್ವದ NDA ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆ 2024 ರಲ್ಲಿರುವ ಮಾರಕ ಅಂಶಗಳು ಯಾವುವು?, ಇದರ ಹಿಂದೆ ಅಡಗಿರುವ ಶಡ್ಯಂತರ ಏನು? ಇದನ್ನು ವಿರೋಧಿಸುವ ವಿಧಾನ ಹೇಗೆ.? ಮತ್ತು ಮಸೂದೆಯನ್ನು ತಿರಸ್ಕಾರ ಮಾಡಲು ಮುಸ್ಲಿಮರಿಗೆ ಮುಂದಿರುವ ಮಾರ್ಗೋಪಾಯಗಳು ಯಾವುವು ? ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಾವೀದ್ ಆಜಂ ಸಾಬ್, ಡಾ. ಮಹಬೂಬ್ ಅವದ್ ಷರೀಫ್ NWC ಸದಸ್ಯರು, ಮೌಲಾನಾ ಶಫೀಕುರ್ ರಹಮಾನ್ ರಾಜ್ಯಾಧ್ಯಕ್ಷ ಸುನ್ನೀ ಉಲೇಮಾ ಮಂಡಳಿ, ಸಾದಿಕ್ ಪಾಷಾ ಸದ್ಭಾವನಾ ವೆಲ್ಫೇರ್ ಅಸೋಸಿಯೇಶನ್, ರಫೀಕ್ ಅಹಮದ್ ಸಾಬ್ ಥಣಿಸಂದ್ರ ಮಸೀದಿ ಫೆಡರೇಶನ್ ಅಧ್ಯಕ್ಷ, ಮುಫ್ತಿ ಸಲ್ಮಾನ್ ಥಣಿಸಂದ್ರ ಮಸೀದಿ ಫೆಡರೇಶನ್ , ಖಾರಿ ನಸೀಮುದಿನ್ ಸಬ್ ರಜಾ ಫೌಂಡೇಶನ್ , ಅಬ್ದುಲ್ ಹಫೀಝ್ ರಶಾದಿ ಅಧ್ಯಕ್ಷ ಸಕಾ ಬೈತುಲ್ ಮಾಲ್, ಮುಫ್ತಿ ಜಹೆರುದ್ದೀನ್ ಸಾಬ್, ಮುಕ್ತಿಯಾರ್ ಅಲಿ ಖಾನ್ ಕರ್ನಾಟಕ ಕಾರ್ಮಿಕ ಪಕ್ಷ , ಭಾಯಿ ಲಾಲ್ ಕರ್ನಾಟಕ ರಕ್ಷಣಾ ವೇದಿಕೆ , ಸಮೀರ್ ಸಾಬ್ ಅಲ್ ಮಿಲ್ಲತ್ ಟ್ರಸ್ಟ್ , ಜಿಲ್ಲಾ ನಾಯಕರು , ಉಲೇಮಾಗಳು ಮತ್ತು ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
