ಪೇಂಟ್ ಅಂಗಡಿಗೆ ಬೆಂಕಿ: ಕೋಟ್ಯಂತರ ರೂ. ಹಾನಿ

ಕೊಪ್ಪಳ:

    ಪೇಂಟ್ ಅಂಗಡಿಗೆ ಬೆಂಕಿ ಹಹತ್ತಿದ್ದುಔದರೆತ ಕೋಟ್ಯಂತರ ರೂಪಾಯಿ ಹಾನಿಗೀಡಾದ ಘಟನೆ ನಡೆದಿದೆ .ನಗರದ ರೈಲ್ವೆ ನಿಲ್ದಾಣ ಮಾರ್ಗದಲ್ಲಿರುವ ರಾಯಲ್ ಪೇಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದ ತಕ್ಷಣ ಅಂಗಡಿಯಲ್ಲಿ ಇದ್ದ ಜನ ಹೊರಗೆ ಓಡಿ ಹೋದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

   ರಾಯಲ್ ಪ್ಲೈವುಡ್ ಅಂಗಡಿಗೂ ಬೆಂಕಿ ಹೊತ್ತಿಕೊಂಡಿತು. ಅಂಗಡಿಯಲ್ಲಿ ಇದ್ದ ಕೊಟ್ಯಾಂತರ ರೂಪಾಯಿ ಮೌಲ್ಯದ ಸಾಮಾಗ್ರಿ ಬೆಂಕಿಗೆ ಆಹುತಿಯಾದ ಗಿರುವ ಸಾಧ್ಯತೆ ಇದೆ.ಮಾಹಿತಿ ದೊರೆತ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಇರುವ ಹಣವನ್ನು ತೆಗೆದುಕೊಂಡು ಹೋದರು.

   ಸ್ಥಳಕ್ಕೆ ಜಿಲ್ಲಾಧಿಕಾರಿ ನಳಿನ್ ಅತುಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಕುಮಾರ್, ಡಿವೈಎಸ್ಪಿ ಮುತ್ತಣ್ಣ ಸರವಗೋಳ ಸೇರಿ ಹಲವರು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap