ಇಳಕಲ್ :
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ಸಂಪೂರ್ಣವಾಗಿ ಬೆಂಬಲ ಕೊಡುತ್ತೇವೆ ಎಂದು ಶುಕ್ರವಾರದಂದು ಇಲ್ಲಿನ ಕಡಪಟ್ಟಿ ಫಾರ್ಮ ಹೌಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುನಗುಂದ ಇಳಕಲ್ ಅವಳಿ ತಾಲೂಕಿನ ಪಂಚಮಸಾಲಿ ಮುಖಂಡರು ಹೇಳಿದರು.
ಸುಮಾರು ೩೦ ಕ್ಕೂ ಹೆಚ್ಚು ಪಂಚಮಸಾಲಿ ಮುಖಂಡರು ನಡೆಸಿದ ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ಮಂಗಳೂರ, ಬಸವರಾಜ ಕಡಪಟ್ಟಿ, ರಾಜಕುಮಾರ ಬಾದವಾಡಗಿ, ಡಾ ಮಹಾಂತೇಶ ಕಡಪಟ್ಟಿ, ಶಿವಪ್ರಸಾದ ಗದ್ದಿ, ವಿಜಯ ಪಾಟೀಲ, ಅಜ್ಜನಗೌಡ ಪಾಟೀಲ ದೇಶದಲ್ಲಿಯೇ ಹೆಸರು ಮಾಡಿರುವ ಪಂಚಮಸಾಲಿ ಸಮಾಜ ಯಾವುದೇ ಕಾರಣಕ್ಕೂ ಒಡೆಯಬಾರದು ಅದು ಬಲಿಷ್ಠವಾಗಿ ಬೆಳೆಯಲು ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳು ಸಾಕಷ್ಟು ಹೋರಾಟವನ್ನು ಜೊತೆಗೆ ಸಂಘಟನೆಯನ್ನು ಮಾಡಿದ್ದಾರೆ ತಮ್ಮ ನಿಲುವುಗಳನ್ನು ಮುಖ್ಯಮಂತ್ರಿ , ಪ್ರಧಾನಮಂತ್ರಿಗಳ ಮುಂದೆ ಪ್ರಭಾವಯುತವಾಗಿ ಮಂಡಿಸುವ ಸಾಮಥ್ಯವನ್ನು ಅವರು ಹೊಂದಿದ್ದಾರೆ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯಾವುದೇ ಅನ್ಯಾಯವಾಗಬಾರದು ಎಂದು ಹೋರಾಟ ಮಾಡಿದ್ದಾರೆ ಈ ನಿಟ್ಟಿನಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ದೃಷ್ಟಿಯಿಂದ ಈ ಪತ್ರಿಕಾಗೋಷ್ಠಿಯನ್ನು ನಡೆಸಲಾಗಿದೆ ರಾಜ್ಯದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಪಂಚಮಸಾಲಿ ಸಮಾಜ ಇನ್ನೂ ಗಟ್ಟಿಯಾಗಿ ಬೆಳೆಯಲಿ ಅದು ಒಡೆಯಬಾರದು ಎಂಬುದು ನಮ್ಮ ಸ್ಪಷ್ಟ ನಿರ್ಧಾರವಾಗಿದೆ. ಎ ೧೯ ಮತ್ತು ೨೦ ರಂದು ನಡೆಯಬೇಕಾಗಿದ್ದ ಎರಡು ಪ್ರತ್ಯೇಕ ಸಭೆಗಳನ್ನು ಮುಂದೂಡಲಾಗಿದೆ ಎಂದು ಸಮಾಜದ ಮುಖಂಡರು ಹೇಳಿದ ಕಾರಣ ಈ ಗೋಷ್ಠಿಯ ಮೂಲಕ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗೆ ನೈತಿಕ ಬೆಂಬಲ ಕೊಡುವ ಜೊತೆಗೆ ನಿಮ್ಮೊಡನೆ ಸದಾಕಾಲವೂ ನಾವು ಇದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಗೊಂದಿ, ವಿರೇಶ ಹುಲ್ಲಳ್ಳಿ ಡಾ ಮಲ್ಲಿಕಾರ್ಜುನ ಗಡಿಯಣ್ಣನವರ, ನಾಗಪ್ಪ ಕಡಪಟ್ಟಿ,ರಾಜುಗೌಡ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು
