ನ್ಯಾಯಾಲಯದ ಅದೇಶದಂತೆ ಬಾಗ್ಯಮ್ಮ ಗಣೇಶ್ ಪ.ಪಂ.ಸದಸ್ಯತ್ವ ಮುಂದುವರಿಕೆ.

ಕೊರಟಗೆರೆ 

    ಕೊರಟಗೆರೆ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾದ್ಯಕ್ಷರ ಚುನಾವಣೆಯಲ್ಲಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಜಿ.ಎನ್.ಭಾಗ್ಯಮ್ಮ ಗಣೇಶ್ ರವರನ್ನು ಅನರ್ಹಗೊಂಡಿದ್ದ ಸದಸ್ಯತ್ವವನ್ನು ಉಚ್ಚ ನ್ಯಾಯಾಲಯ ರದ್ದುಗೊಲಿಸಿದ ಸದಸ್ಯತ್ವವನ್ನು ಮತ್ತೆ ಮುಂದುವರೆಯಲು ಅದೇಶಿಸಿದೆ ಎಂದು ಸದಸ್ಯೆ ಭಾಗ್ಯಮ್ಮ ಗಣೇಶ್ ತಿಳಿಸಿದ್ದಾರೆ.ಅವರು ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾಧಿಕಾರಿಗಳಾದ ವಿ ಎಸ್ ಪಾಟೀಲ್ ವಿಪ್ ಅನ್ವಯ ರದ್ದುಗೊಳಿಸಲಾದ ಸದಸ್ಯತ್ವವನ್ನ ಉಚ್ಚ ನ್ಯಾಯಾಲಯ ಊರ್ಜಿತಗೊಳಿಸಿರುವುದಕ್ಕೆ ನ್ಯಾಯಕ್ಕೆ ತಂದ ಜಯ  ಎಂದು ಹರ್ಷ ವ್ಯಕ್ತಪಡಿಸಿದರು.

    ಕೊರಟಗೆರೆ ಪಟ್ಟಣ ಪಂಚಾಯಿತಿಯಲ್ಲಿ 2020 ರಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ 6ನೇ ವಾರ್ಡ್ನ ಜೆಡಿಎಸ್ ಬೆಂಬಲಿತ ಸದಸ್ಯೆ ಜಿ.ಎನ್.ಭಾಗ್ಯಮ್ಮ ಗಣೇಶ್ ಭಾಗವಹಿಸದೆ ಗೈರು ಹಾಜರಾದ ಮೇರೆಗೆ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇದೆ) ಅಧಿನಿಯಮ 1983 ರಡಿ ಜಿ.ಎನ್.ಭಾಗ್ಯಮ್ಮ ಗಣೇಶ್ ರವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಅದೇಶಿಸಲಾಗಿತ್ತು. ಅದರೆ ಅನರ್ಹಗೊಂಡ ಸದಸ್ಯೆ ಜಿ.ಎನ್.ಭ್ಯಾಗಮ್ಮ ಗಣೇಶ್ ಅನರ್ಹ ಅದೇಶದ ವಿರುದ್ದ ಕರ್ನಾಟಕ ಘನ ಉಚ್ಚ ನ್ಯಾಯಲಯದಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ರಿಟ್ ಅಪೀಲು ಪುರಸ್ಕರಿಸಿ ಭಾಗ್ಯಮ್ಮ ರವರನ್ನು ಪಟ್ಟಣ ಪಂಚಾಯಿತಿ 6ನೇ ವಾರ್ಡ್ ಸದಸ್ಯೆಯನ್ನಾಗಿ ಮುಂದುವರೆಸು ವಂತೆ ಅದೇಶಿಸಿದ್ದು ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿಗಳು ಸದಸ್ಯೆಯಾಗಿ ಮುಂದುವರೆಸುವಂತೆ ಅದೇಶ ನೀಡಿದ್ದಾರೆ ಎಂದರು.

   ಈ ಹಿನ್ನಲೆಯಲ್ಲಿ ಕೊಟಗೆರೆ ಪಟ್ಟಣ ಪಂಚಾಯಿತಿಯಲ್ಲಿ ಜಿಲ್ಲಾಧಿಕಾರಿಗಳು ಅದೇಶದಂತೆ ಸದಸ್ಯೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪಟ್ಟಣ ರಾಜೀವ್ ಭವನದಲ್ಲಿ ಪ್ರತಿಕಾ ಗೋಷ್ಟಿ ನಡೆಸಿದ ಭ್ಯಾಗ್ಯಮ್ಮ ನನ್ನ ವೈಕ್ತಿಕ ಕಾರಣಗಳಿಂದ 2820 ರಲ್ಲಿ ನಡೆದ ಅಧ್ಯಕ್ಷ ಉಪಾದ್ಯಕ್ಷರ ಚುನಾವಣೆಯಲ್ಲಿ ಗೈರು ಹಾಜರಾದ ಹಿನ್ನೆಲೆಯಲ್ಲಿ ತಮ್ಮ ಸದಸ್ಯತ್ವ ಅನರ್ಹ ಗೊಳಿಸಿದ್ದ ಹಿನ್ನೆಲೆಯಲ್ಲಿ ಸದಸ್ಯತ್ವ ಮುಂದುವರೆಸಲು ಉಚ್ಚ ನ್ಯಾಯಾಲಯದ ಮೂಲಕ ನ್ಯಾಯ ದೊರೆಕಿದ್ದು ಉಳಿದ ನನ್ನ ಅವದಿಯ ದಿನಗಳಲ್ಲಿ ಗೃಹ ಸಚಿವರು ಹಾಗೂ ಕ್ಷೇತ್ರದ ಶಾಸಕರ ಡಾ. ಜಿ.ಪರಮೇಶ್ವರ್ ರವರ ಮಾರ್ಗದರ್ಶನದಲ್ಲಿ ನನ್ನ ವಾರ್ಡ್ನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದ ಭ್ಯಾಗ್ಯಮ್ಮ ಗಣೇಶ್ ಸದಸ್ಯತ್ವ ಮುಂದುವ ರೆಸಲು ಸಹಕರಿಸಿದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ಕೃತಜ್ಞನೆ ಸಲ್ಲಿಸಿದರು.

   ಪತ್ರಿಕಾ ಗೋಷ್ಠಿಯಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಕಾಂಗ್ರೆಸ್ ಪಕ್ಷದ ಶಾಲು ಹೊದಿರುವ ಮೂಲಕ ಅಭಿನಂದಿಸಿದರೆ ವೇದಿಕೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಮ್ಮ, ಯುವ ಕಾಂಗ್ರೆಸ್ ಅಧ್ಯಕ್ಷ ಬೈರೇಶ್, ಪ.ಪಂ.ಅಧ್ಯಕ್ಷೆ ಕೆ.ಓ.ಅನಿತಾ, ಉಪಾದ್ಯಕ್ಷ ಹುಸ್ನಾಫಾರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಎಸ್.ಹೇಮಲತಾ, ಕೆ.ಪಿ.ಸಿ.ಸಿ ಸದಸ್ಯ ಹಾಗೂ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ, ಸದಸ್ಯರುಗಳಾದ ಕೆ.ಆರ್.ಓಬಳರಾಜು, ನಾಗರಾಜು, ಟಿ.ಎ.ಪಿ.ಸಿ.ಎಂ ಅಧ್ಯಕ್ಷ ಶಿವಾನಂದ, ಗ್ರಾ.ಪಂ. ಸದಸ್ಯ ಮಂಜುನಾಥ್, ಮುಖಂಡರುಗಳಾದ ಕೆ.ವಿ.ಮಂಜುನಾಥ್, ಗಣೇಶ್, ಕಾರ್ ಮಹೇಶ್, ಆಟೋ ಕುಮಾರ್, ರಾಘವೇಂದ್ರ, ಸುರೇಶ್, ಕಲೀಂಉಲ್ಲಾ, ನಾಗರಾಜು, ಕಿರಣ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link