ಪಾವಗಡ:
ಶಾಶ್ವತ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡ ಪಾವಗಡದಲ್ಲಿ ವಿವಿಧ ಇಲಾಖೆಗಳ ವತಿಯಿಂದ ನಡೆಯಬೇಕಿದ್ದ ನರೇಗ ಪ್ರಗತಿ ಶೂನ್ಯವಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ ಕಿಡಿಕಾರಿದರು.
ಏಪ್ರಿಲ್ 23 ರಂದು ತಾ.ಪಂ.ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು ತಾಲೂಕಿನ 34 ಗ್ರಾ.ಪಂ.ಗಳು ಕೃಷಿ ಇಲಾಖೆ, ಆರಣ್ಯ ಇಲಾಖೆ, ರೇಷ್ಮೇ ಹಾಗೂ ತೋಟಗಾರಿP ಇಲಾಖೆÉಯಲ್ಲಿ ಒಂದು ತಿಂಗಳು ಕಳೆದರು ನಿಗದಿತ ಗುರಿ ಸಾಧಿಸದಿರುವುದು ನಿಮ್ಮ ಕರ್ತವ್ಯದ ವೈಫಲ್ಯವೆಂದ ಅವರು ಕೊವಿಡ್ ಸಂಕಷ್ಟ ಸಮಯದಲ್ಲಿ ವಲಸೆ ಕಾರ್ಮಿಕರಿಗೆ, ರೈತರಿಗೆ, ನಿರುದ್ಯೋಗಿಗಳಿಗೆ ಈ ಯೋಜನೆ ವರದಾನವಾಗಿದ್ದು ನಿಗದಿತ ಗುರಿ ಸಾಧಿಸಲು ನಿಮಗೇನಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯಲ್ಲೇ ಪಾವಗಡ ತಾಲ್ಲೂಕು ಶಾಶ್ವತ ಬರಪೀಡಿತ ಪ್ರದೇಶವಾಗಿದ್ದು ಇಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಪ್ಲೋರೈಡ್ ಹೆಚ್ಚಾಗುತ್ತಿದ್ದು, ಹೆಚ್ಚಾಗಿ ಕೃಷಿಹೊಂಡ ಕಲ್ಯಾಣಿಗಳಿಗೆ ಹೆಚ್ಚು ಒತ್ತು ನೀಡಿ ಮಳೆ ನೀರು ಅಲ್ಲೆ ಹಿಂಗುವಂತೆ ಮಾಡಬೇಕೆಂದ ಅವರು ಸಮರ್ಪಕವಾಗಿ ಕೆಲಸ ಮಾಡದಿದ್ದಲ್ಲಿ ಮುಂದಿನ ಪರಿಣಾಮಕ್ಕೆ ನೀವೆ ಜವಾಬ್ದಾರರೆಂದು ತಾ.ಪಂ.ನ ಇ.ಒ.ಶಿವರಾಜಯ್ಯ ಅವರಿಗೆ ಎಚ್ಚರಿಕೆ ನೀಡಿದರು. ತಾಲ್ಲೂಕಿನ ಶುದ್ದಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ 22 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಯಾವ ರೀತಿ ಪೂರೈಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಗ್ರಾಮೀಣ ಕುಡಿಯುವ ನೀರು ವಿಭಾಗದ ಅಧಿಕಾರಿ ಹನುಮಂತರಾಯಪ್ಪ ಅವರಿಂದ ಮಾಹಿತಿ ಪಡೆದರು.
ಗಡಿನಾಡು ಪಾವಗಡದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ತಡೆಗಟ್ಟುವಲ್ಲಿ ತಾಲ್ಲೂಕು ಅಡಳಿತ ವಿಫಲವಾಗಿದೆ ಎಂದ ಅವರು ಜಿಲ್ಲೆಯಲ್ಲಿ ಇತರೆ ತಾಲ್ಲೂಕುಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಆದರೇ ಪಾವಗಡದಲ್ಲಿ ಮಾತ್ರ ಅಂತಹ ಯಾವುದೇ ಕಾರ್ಯ ನಡೆದಿಲ್ಲ ಎಂದು ಜಿಪಂ ಸಿಇಒ ಅವರು 311 ಜನ ಹೊಂ ಕ್ವಾರಂಟೈನ್ನಲ್ಲಿದ್ದು, 124 ಜನ ಹೊಂ ಐಸೋಲೇಶನ್ನಲ್ಲಿದ್ದಾರೆ ಇವರ ಸಂಪರ್ಕಿತ ವ್ಯಕ್ತಿಗಳ ಮಾಹಿತಿ ಪಡೆಯಲಾಗಿದೆಯೇ ಎಂದು ಟಿ.ಹೆಚ್.ಓ.ತಿರುತಯ್ಯ ಅವರು ಅಸಮರ್ಪಕ ಉತ್ತರ ನೀಡಿದಾಗ ನಿಮಗೆ ಎಲ್ಲಾ ಸೌಲಭ್ಯ ಕಲ್ಪಿಸಿದರೂ ಈ ವಿಳಂಭ ಧೋರಣೆ ಏಕೆ, ಪಾವಗಡ ತಾಲೂಕಿನಲ್ಲಿ ಕೋವಿಡ್ ಪರೀಕ್ಷೆ ಕ್ಷೀಣಿಸಿದೆ, ಜನತೆ ವ್ಯಾಕ್ಸಿನ್ ಪಡೆಯುವಲ್ಲಿ ಕೂಡ ಗುರಿ ಸಾಧಿಸಿಲ್ಲ ಈ ಭಾಗದ ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರನ್ನು ಬಳಕೆ ಮಾಡಿಕೊಂಡು ಕೋವಿಡ್ ಪರೀಕ್ಷೆ ಮತ್ತು ವ್ಯಾಕ್ಸಿನ್ ಪಡೆಯುವ ಗುರಿ ಸಾಧಿಸಬೇಕೆಂದು ಎಚ್ಚರಿಸಿದರು.
ಜಿ.ಪಂ.ಉಪಕಾರ್ಯದರ್ಶಿ ರಮೇಶ್.ಟಿ.ಕೆ ಅವರು ಸಭೆಯಲ್ಲಿ ಮಾತನಾಡಿ ಕೃಷಿ ಇಲಾಖೆಯಲ್ಲಿ ಒಂದು ತಿಂಗಳು ನರೇಗ ನಿಗಧಿತ ಗುರಿ ಸಾಧಿಸದ ಬಗ್ಗೆ ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿ ಸೂಚಿಸಿದ್ದು ಪ್ರತಿಯೊಂದಕ್ಕೂ ನೆಪ ಹೇಳುವುದಕ್ಕಿಂತ ಕೆಲಸ ಮುಖ್ಯವೆಂದ ಅವರು ಗ್ರಾಮೀಣ ಪ್ರದೇಶಕ್ಕೆ ಇದುವರೆಗೂ ರಸ್ತೆಗಳಿಲ್ಲದ ಗ್ರಾಮಗಳ ಪಟ್ಟಿ ಮಾಡಿ ಪಿಡಬ್ಲೂಡಿಗೆ ನೀಡುವುದು ಹಾಗೂ ಕರ್ನಾಟಕ ಸರ್ಕಾರ ಆರ್ಟ್ಆಪ್ಲಿವಿಂಗ್ ಸಂಸ್ಥೆ ಜೊತೆ ಒಡಂಬಂಡಿಕೆ ಮಾಡಿಕೊಂಡು 7970 ನರೇಗ ಕಾರ್ಯಗಳನ್ನ ತಾಲೂಕಿನಲ್ಲಿ ಕೈಗೆತ್ತಿಕೊಂಡಿರುವುದು ತಾಲೂಕಿಗೆ ವರದಾನವಾಗಿದ್ದು, ಇಲ್ಲಿ ಹೆಚ್ಚು ಅಂತರ್ಜಲ ವೃದ್ಧಿಗೆ ಅವಕಾಶ ಕಲ್ಪಿಸಿ ಎಂದು ಸೂಚಿಸಿದರು. ಸಭೆಯಲ್ಲಿ ತಾಪಂ ಇ.ಒ ಶಿವರಾಜಯ್ಯ, ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
