ಪಾವಗಡ :
ಟ್ರ್ಯಾಕ್ಟರ್ ಟ್ರ್ಯಾಲಿಯ ಟೈರ್ ಸಿಡಿದು, ವ್ಯಕ್ತಿಯೊಬ್ಬ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ರಾಜವಂತಿ ಗ್ರಾಮದ ಜನತಾ ಕಾಲನಿಯಲ್ಲಿ ಶನಿವಾರ ಜರುಗಿದೆ.
ರಾಜವಂತಿ ಗ್ರಾಮದ ಸುರೇಶ್ (28) ಮೃತ ಪಟ್ಟ ದುರ್ದೈವಿಯಾಗಿದ್ದಾರೆ. ಪಂಚರ್ ಹಾಕಿಸಿ, ಟೈರ್ ಅಳವಡಿಸುವಾಗ ಈ ಅವಘಡ ಜರುಗಿದೆ. ಮೃತರು ಪತ್ನಿ, ಮಗಳನ್ನು ಅಗಲಿದ್ದು, ಸ್ಥಳಕ್ಕೆ ಮಧುಗಿರಿ ಡಿ.ವೈ.ಎಸ್.ಪಿ. ರಾಮಕೃಷ್ಣಯ್ಯ, ಪಾವಗಡ ಪೊಲೀಸ್ ಠಾಣೆಯ ಸಿ.ಪಿ.ಐ. ಲಕ್ಷ್ಮೀಕಾಂತ್ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
