ಪಾವಗಡ :
ಶುಕ್ರವಾರ ಬೆ ಳ್ಳಂಬೆಳಗ್ಗೆಯೆ ಎರಡು ಕರಡಿಗಳು ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿದ ಘಟನೆ ತಾಲ್ಲೂಕಿನ ಕಡಮಲಕುಂಟೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಜೋಗಿಕುಟುಂಬಕ್ಕೆ ಸೇರಿದ ಭೈರಪ್ಪ(36) ಎಂಬ ವ್ಯಕ್ತಿ ಕಡಮಲಕುಂಟೆ ಗ್ರಾಮದ ಸಮೀಪ ಗುಡಿಸಲು ಹಾಕಿ ಕೊಂಡು ವಾಸಿಸುತ್ತಿದ್ದು, ಶುಕ್ರವಾರ ಬೆಳಗ್ಗೆ ಬಹಿರ್ದೆಸೆಗೆ ಹೋದಾಗ ಏಕಾಏಕಿ ಎರಡು ಕರಡಿಗಳು ಈತನ ತಲೆ ಮತ್ತು ಬಲಗಾಲಿಗೆ ತೀವ್ರ ಗಾಯಗಳುಂಟು ಮಾಡಿವೆ.
ಭೈರಪ್ಪ ಕಿರುಚಿಕೊಂಡಾಗ ಗ್ರಾಮಸ್ಥರು ಓಡಿಬಂದು ಭೈರಪ್ಪನನ್ನು ಕರಡಿಗಳಿಂದ ರಕ್ಷಿಸಿದ್ದಾರೆ. ಈತನಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ವಿಷಯ ಗೊತ್ತಾಗಿ ಅರಣ್ಯ ಇಲಾಖೆಯ ಬಸವ ರಾಜು ಸರ್ಕಾರಿ ಆಸ್ಪತ್ರೆಗೆ ದಾವಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
