ಹಲಸಿ:
ಹಲಸಿ-ಬೇಕವಾಡ ರಸ್ತೆಯ ನರಸೇವಾಡಿ ಬ್ರಿಡ್ಜ್ ಬಳಿ ತಡರಾತ್ರಿ 3 ಗಂಟೆ ಸುಮಾರಿಗೆ ನಡೆದ ಗುಂಡಿನ ದಾಳಿಯಲ್ಲಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ .ಭಾನುವಾರ ಮಧ್ಯರಾತ್ರಿ ಸುಮಾರಿಗೆ ನಡೆದಿದೆ.
ಹಲಸಿಯ ಯುವಕನ ಅಲ್ತಾಫಗೌಸ್ ಮಕಾಂದರ್ ವಯಸ್ಸು 27.ಎಂಬುವನ ಮೇಲೆ ದಾಳಿಯಾಗಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಹಲಸಿ ಖಾನಾಪುರದ ಬೇಕ್ವಾಡಕ್ಕೆ ಹೋಗುವ ನರಸೇವಾಡಿ ಬ್ರಿಡ್ಜ್ ಹತ್ತಿರ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಯುವಕನ ಮೇಲೆ ಗುಂಡು ಹಾರಿಸಿದ ಕೆಲವರು ಯುವಕನ ಶವವನ್ನು ಮನೆಗೆ ತಂದಿದ್ದಾರೆ.
ಆ ನಂತರ ಸುದ್ದಿ ಗಾಳಿಯಂತೆ ಎಲ್ಲೆಡೆ ಹರಡಿ ಪೊಲೀಸರನ್ನೂ ಕರೆಸಲಾಯಿತು. ಡಿಎಸ್ಪಿ, ಪೊಲೀಸ್ ಇನ್ಸ್ ಪೆಕ್ಟರ್ ತಕ್ಷಣವೇ ಸೇನೆಯೊಂದಿಗೆ ಪ್ರದೇಶವನ್ನು ಪ್ರವೇಶಿಸಿ ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಇರಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್, ನಂದಗಡ ಪೊಲೀಸ್ ನಿರೀಕ್ಷಕ ಎಸ್. ಸಿ. ಪಾಟೀಲ್ ಸ್ಥಳದಲ್ಲೇ ಠಿಕಾಣಿ ಹೂಡಿದ್ದು ಪರಿಶೀಲನೆ ನಡೆಸಿದ್ದು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
