ಪೂಜ್ಯರ ಪಾದಕಮಲಗಳಿಗೆ ಭಕ್ತಿ ಸಮರ್ಪಣೆ ……!

ಶಿವಯೋಗಿ

ಶತಮಾನದ ಶಕಪುರುಷ
ಸಿದ್ಧಗಂಗೆಯ ಶಿವಯೋಗಿ
ತ್ರಿದಾಸೋಹ ನಿರತ ಚೇತನ
ಕಲ್ಪತರು ನಾಡ ಕರ್ಮಯೋಗಿ |

ಹಸಿದವರಿಗೆ ಅನ್ನವನ್ನು ನೀಡಿ
ಅಜ್ಞಾನ ಕಳೆದ ಅಕ್ಷರ ಯೋಗಿ
ಬಳಲಿದವರಿಗೆ ಆಶ್ರಯ ಕೊಟ್ಟ
ಶತಾಯುಷಿ ಭವ, ಭಾವಯೋಗಿ |

ಒಳಗಣ್ಣು ತೆರೆದು ನಾಡಿ ಹಿಡಿದು
ಆಪ್ತತೆಯ ಮೈದವಡಿದ ಧನ್ಯಯೋಗಿ
ಅಸಾಹಯಕರ ಅಂತರಂಗ ಅರಿತು
ತಾನೇ ಅವರ ಕಣ್ಣಾದ ಧರ್ಮಯೋಗಿ |

ದೇಶದೆಲ್ಲೆಡೆ ದಾಸೋಹ ಪರಂಪರೆ ಸೃಷ್ಟಿಸಿ
ನವ ರಸ ಭಾವ ಕಿರಣವಾದ ಆತ್ಮಯೋಗಿ
ಸೇವೆಯ ಬಾಗಿಲು ತೆರೆದು ಕಾಯಕ ಮಾಡಿ
ವಿಶ್ವಮಾನ್ಯ ಚೇತನರೆನಿಸಿದ ಕಾಯಕಯೋಗಿ |

ಸರಳತೆ ಸಜ್ಜನಿಕೆ ವ್ಯಕ್ತಿತ್ವ ವಿಕಸನದ ದೀಪ
ಎಂದು ತಾನೇ ಹಣತೆಯಾದ ಜ್ಞಾನಯೋಗಿ
ನುಡಿದಂತೆ ನಡೆದ ಹಲವಾರು ಸಜ್ಜನರಂತೆ
ಹಣತೆಯ ಹಚ್ಚಿ ಸಾಧಕರಾದ ದಿವ್ಯಯೋಗಿ |

ಭಕ್ತರ ತನು ಮನಗಳ ತಮವ ಕಳೆದು
ಸುಜ್ಞಾನವ ಬಿತ್ತಿದ ಪರಂದಾಮ ಯೋಗಿ
ಜನ ಮನ ಅರಳುವಂತೆ ಶುಭ ಹಾರೈಸಿ
ಜನಮಾನಸರತ್ನರಾದ ನಿಷ್ಕಾಮ ಯೋಗಿ. ||

 
ವೆನ್ನಲಕೃಷ್ಣ ತುಮಕೂರು
98457 89124