ರಸ್ತೆ ಆಪಘಾತ ;ಸ್ಥಳದಲ್ಲೇ ನಾಲ್ವರ ಸಾವು

ಚಿತ್ರದುರ್ಗ:

  ಹೊಸದುರ್ಗ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಕಾರು ಮತ್ತು ಕ್ರೂಸರ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗೌತಮ್ ಸಿಂಗ್, ಮದನ್ ಸಿಂಗ್, ಮುಖೇಶ್ ಸಿಂಗ್ ಹಾಗೂ ಕ್ರೂಸರ್ ಚಾಲಕ ಲೋಕೇಶ್ ಮೃತಪಟ್ಟರು.

  ಚಿತ್ರದುರ್ಗದಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ಶೋಭಯಾತ್ರೆಗೆ ಲೋಕೇಶ್ ಕ್ರೂಸರ್‌ನಲ್ಲಿ ಬಂದಿದ್ದರು. ಗಣಪತಿ ವಿಸರ್ಜನೆ ಮಹೋತ್ಸವ ಮುಗಿಸಿ ಭಾನುವಾರ ನಸುಕಿನಲ್ಲಿ ಅರಸೀಕೆರೆಗೆ  ಬರುವಾಗ ಅಪಘಾತ ಸಂಭವಿಸಿದೆ. 

 ಹೊಸದುರ್ಗದಿಂದ ಅರಸೀಕೆರೆ ಕಡೆಗೆ ಹೊರಟಿದ್ದ ಕ್ರೂಸರ್ ಹಾಗೂ ಹೊಸದುರ್ಗ ಕಡೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿವೆ. ಕಾರಿನಲ್ಲಿದ್ದ ಮೂವರು ಹಾಗೂ ಕ್ರೂಸರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೊಸದುರ್ಗ ಠಾಣೆಯ ಪೊಲೀಸರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link